ಶಿವಮೊಗ್ಗ: ಆ.13 ರಂದು ನಾಲ್ಕು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

Update: 2018-08-12 14:51 GMT

ಶಿವಮೊಗ್ಗ, ಆ.13: ಜಿಲ್ಲೆಯಾದ್ಯಂತ ಧಾರಾಕಾರ ವರ್ಷಧಾರೆಯಾಗುತ್ತಿದ್ದು, ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಾಗರ, ಸೊರಬ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಶಾಲೆಗಳಿಗೆ ಆ. 13 ರ ಸೋಮವಾರದಂದು ರಜೆ ಘೋಷಣೆ ಮಾಡಲಾಗಿದೆ. 

ಮಳೆಯ ಕಾರಣದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಮೇಲ್ಕಂಡ ನಾಲ್ಕು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆಯ ನಿರ್ಧಾರ ಪ್ರಕಟಿಸಿದೆ. ಮಳೆಯ ಪ್ರಮಾಣ ಗಮನಿಸಿ ಮಂಗಳವಾರದಿಂದ ಶಾಲೆಗಳ ಪುನಾರಾರಂಭಗೊಳಿಸುವ ಅಥವಾ ರಜೆ ವಿಸ್ತರಿಸುವ ಕುರಿತಂತೆ ನಿರ್ಧರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News