ಮಂಡ್ಯ: ಹಲ್ಲೆಗೊಳಗಾಗಿದ್ದ ರೌಡಿ ಶೀಟರ್ ಮೃತ್ಯು

Update: 2018-08-12 16:20 GMT

ಮಂಡ್ಯ, ಆ.12: ಶ್ರೀರಂಗಪಟ್ಟಣ ಬಳಿ ಶನಿವಾರ ಸಂಜೆ 10 ಮಂದಿಯ ತಂಡದಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬೆಂಗಳೂರಿನ ರೌಡಿ ಶೀಟರ್ ಅರಸಯ್ಯ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಇನೋವಾ ಕಾರಿನಲ್ಲಿ ಬಂದಿದ್ದ ಅರಸಯ್ಯ ಎಂಬ ಬೆಂಗಳೂರು ಮೂಲದ ರೌಡಿ ಮೇಲೆ ಮತ್ತೊಂದು ಕಾರಿನಲ್ಲಿ ಬಂದ 10ಕ್ಕೂ ಹೆಚ್ಚು ಮಂದಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತೀವ್ರ ಗಾಯಗೊಂಡ ಅರಸಯ್ಯನನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News