ಹಾಸನ: ವ್ಯಕ್ತಿಯ ಅನುಮಾನಾಸ್ಪದ ಸಾವು; ಕೊಲೆ ಶಂಕೆ

Update: 2018-08-12 17:20 GMT

ಹಾಸನ,ಆ.12: ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯೂರಿಟಿಯು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಈ ಸಾವು ಕೊಲೆ ಎಂದು ಆರೋಪಿಸಿ ಮೈಸೂರು ಸಿಲ್ಕ್ಸ್ ಬಟ್ಟೆ ಅಂಗಡಿ ಮಳಿಗೆ ಮುಂದೆ ಶವವನ್ನಿಟ್ಟು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ಮದ್ಯಾಹ್ನ ನಡೆದಿದೆ.

ನಗರದ ಬಿ.ಎಂ. ರಸ್ತೆ, ಸುವರ್ಣ ಹೋಟೆಲ್ ಎದುರು ಇರುವ ಮೈಸೂರು ಸಿಲ್ಕ್ಸ್ ಮಳಿಗೆಯಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಅಶೋಕ್ (32) ಎಂಬವರೇ ಅನುಮಾನಸ್ಪದವಾಗಿ ಸಾವನ್ನಪ್ಪಿದ ವ್ಯಕ್ತಿ. ನಗರದ ಸಮೀಪ ಹಾಲುವಾಗಿಲುನಲ್ಲಿ ವಾಸವಾಗಿರುವ ಅಶೋಕ್ ಸುರಕ್ಷಾ ಸೆಕ್ಯೂರಿಟಿ ಮೂಲಕ ಮೈಸೂರು ಸಿಲ್ಕ್ಸ್ ನಲ್ಲಿ ಕಳೆದ 5 ತಿಂಗಳಿನಿಂದ ರಾತ್ರಿ ಪಾಳಿ ಸೆಕ್ಯೂರಿಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇಂದು ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ಅಶೋಕ್ ಕಿವಿ, ಬಾಯಿಯಲ್ಲಿ ರಕ್ತ ಸೋರುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಸೆಕ್ಯೂರಿಟಿ ಅಶೋಕ್ ಕುಟುಂಬದವರು ಸುದ್ದಿಗಾರರೊಂದಿಗೆ ಮಾತನಾಡಿ, ಅಶೋಕ್ ಕಳೆದ 5 ತಿಂಗಳಿನಿಂದ ಮೈಸೂರು ಸಿಲ್ಕ್ಸ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಡ್ಯೂಟಿಯಲ್ಲಿದ್ದ ಅಶೋಕ್‍ನನ್ನು ಹೊಡೆದು ಕೊಲೆ ಮಾಡಿದ್ದಾರೆ. ಪ್ರತಿ ಭಾನುವಾರ ಮದ್ಯಾಹ್ನದವರೆಗೂ ಮಳಿಗೆ ತೆರೆಯುತ್ತಿದ್ದವರು ಈ ಭಾನುವಾರ ಯಾಕೆ ತೆರೆದಿಲ್ಲ ಎಂದು ಪ್ರಶ್ನಿಸಿ, ನ್ಯಾಯ ಸಿಗದಿದ್ದರೆ ಮಳಿಗೆ ಮುಂದೆ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News