ಕೇರಳ ಪ್ರವಾಹದಿಂದ ಹಾನಿಗೀಡಾದ ಪಾಸ್ ಪೋರ್ಟ್ ಗಳನ್ನು ಉಚಿತವಾಗಿ ಬದಲಾಯಿಸಿ ಕೊಡಲಾಗುವುದು : ಸುಷ್ಮಾ

Update: 2018-08-13 07:09 GMT

ಹೊಸದಿಲ್ಲಿ, ಆ. 13: ಕೇರಳದಲ್ಲಿ ನೆರೆಯಿಂದಾಗಿ ಹಾನಿಗೀಡಾದ ಪಾಸ್ ಪೋರ್ಟ್ ಗಳನ್ನು ಉಚಿತವಾಗಿ ಸರಕಾರ ಬದಲಾಯಿಸಿ ಕೊಡುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

‘‘ಕೇರಳದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಬಹಳಷ್ಟು ಹಾನಿಯುಂಟು ಮಾಡಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೇ ನೆರೆಯಿಂದಾಗಿ ಹಾನಿಗೊಳಗಾದ ಪಾಸ್‌ಪೋರ್ಟ್ ಗಳನ್ನು ಯಾವುದೇ ಶುಲ್ಕವಿಲ್ಲದೆ ಬದಲಾಯಿಸಿ ಕೊಡಲಾಗುವುದು. ಸಂಬಂಧಿತ ಪಾಸ್ ಪೋರ್ಟ್ ಕೇಂದ್ರಗಳನ್ನು ಸಂಪರ್ಕಿಸಿ’’ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಕೇರಳದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ 35 ಜನರು ಬಲಿಯಾಗಿ, ಸಾವಿರಾರು ಮಂದಿ ಮನೆಮಠ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News