ಮೈಸೂರು: ಕೊಡಗು ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಡಳಿತದಿಂದ ಅಗತ್ಯ ಸಾಮಾಗ್ರಿ ಪೂರೈಕೆ

Update: 2018-08-18 17:33 GMT

ಮೈಸೂರು,ಆ.18: ಮೈಸೂರು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರಪಾಲಿಕೆ ವತಿಯಿಂದ ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಅವಶ್ಯಕ ಸಾಮಗ್ರಿಗಳನ್ನು ನೀಡುವಂತೆ ದಾನಿಗಳು ಮತ್ತು ಸಂಘಸಂಸ್ಥೆಗಳಿಂದ ಸಹಾಯಕ್ಕಾಗಿ ಯಾಚಿಸಲಾಗಿದ್ದು, ನಗರದ ಪುರಭವನದಲ್ಲಿ ಅದಕ್ಕಾಗಿಯೇ ಕೇಂದ್ರ ತೆರೆಯಲಾಗಿತ್ತು. ದಾನಿಗಳು ಸಹಕರಿಸಿದ್ದು, ಸಮರೋಪಾದಿಯಲ್ಲಿ ವಿತರಣಾ ಕಾರ್ಯ ನಡೆದಿದೆ.

ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ವತಿಯಿಂದ ಅವಶ್ಯಕ ವಸ್ತುಗಳನ್ನು ರವಾನಿಸಲಾಗುತ್ತಿದೆ. ಬ್ರೆಡ್, ಬಿಸ್ಕತ್, ಹಾಲಿನ ಪೌಡರ್, ಕುಡಿಯುವ ನೀರಿನ ಬಾಟಲ್, ಔಷಧಿಗಳು, ಸೋಪು ಸೇರಿದಂತೆ ಇನ್ನಿತರ ವಸ್ತುಗಳನ್ನು ರವಾನಿಸಲಾಗುತ್ತಿದೆ. ಸಹಾಯಕ್ಕಾಗಿ ಸಮರೋಪಾದಿಯಲ್ಲಿ  ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ. ದಾನಿಗಳು ಹೆಚ್ಚಿನ ಮಾಹಿತಿಗಾಗಿ ದೂ.ಸಂ ನಿಯಂತ್ರಣಾ ಕೊಠಡಿ 0821-2440890, 9449841196 ಸಂಪರ್ಕಿಸಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News