ಕೊಡಗು, ಕೇರಳ: ಮುಂದುವರಿದ ಕಾರ್ಯಾಚರಣೆ...

Update: 2018-08-18 18:15 GMT

ಮಹಾಮಳೆ ಹಾಗೂ ಎಲ್ಲೆಡೆ ಗುಡ್ಡ ಕುಸಿತದಿಂದ ಕೊಡಗಿನಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿದ್ದು, ಜನರ ರಕ್ಷಣೆಗೆ ಭೂಸೇನೆ ಹಾಗೂ ನೌಕಾಪಡೆಯ ಯೋಧರು ಧಾವಿಸಿದ್ದಾರೆ. ಇನ್ನೊಂದೆಡೆ ಭೀಕರ ಮಳೆಯಿಂದ ನಲುಗಿರುವ ಕೇರಳದಲ್ಲಿ ಮೂರೂ ಸಶಸ್ತ್ರ ಪಡೆಗಳ ನೇತೃತ್ವದಲ್ಲಿ ಎನ್‌ಡಿಆರ್‌ಎಫ್ ಪಡೆಗಳೊಂದಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ನೆರೆಯಲ್ಲಿ ಸಿಕ್ಕಿಕೊಂಡಿರುವ ಜನರನ್ನು ತೆರವುಗೊಳಿಸಲು ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಲು 38 ಹೆಲಿಕಾಪ್ಟರ್‌ಗಳನ್ನು ತೊಡಗಿಸ ಲಾಗಿದೆ. ಸಂಪನ್ಮೂಲ ಸಾಗಾಟಕ್ಕೆ 20 ವಿಮಾನಗಳನ್ನು ಬಳಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor