ಚಿಕ್ಕಮಗಳೂರು: ಚಿನ್ನಾಭರಣ, ನಗದು ಕಳವು ಪ್ರಕರಣದ ಆರೋಪಿ ಸೆರೆ

Update: 2018-08-18 18:21 GMT

ಚಿಕ್ಕಮಗಳೂರು, ಆ. 18: ಚಿಕ್ಕಮಗಳೂರು ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯ ಸಿಂದಿಗೆರೆ ಗ್ರಾಮದ ಚಂದ್ರೇಗೌಡ ಎಂಬವರ ಮನೆಗೆ ಎ.26ರಂದು ನುಗ್ಗಿ ಬಂಗಾರದ ಒಡವೆಗಳು ಹಾಗೂ ನಗದು ಕಳವು ಮಾಡಿದ ಆರೋಪದಲ್ಲಿ ಓರ್ವನನ್ನು ಇಲ್ಲಿನ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪರಮೇಶ್ ಯಾನೆ ಚಂದ್ರೇಗೌಡ (24) ಬಂಧಿತ ಆರೋಪಿ ಎಂದು ಗುರುತಿಸಲಾಗಿದ್ದು, ಈತನಿಂದ ಚಿನ್ನಾಭರಣ, ಮೊಬೈಲ್ ಹಾಗು ಬೈಕ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧೀಕ್ಷಕರಾದ  ಲಕ್ಷ್ಮಿ ಪ್ರಸಾದ್ ಚಿಕ್ಕಮಗಳೂರು,  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ. ಅಣ್ಣಪ್ಪ ನಾಯಕ್, ಚಿಕ್ಕಮಗಳೂರು ಉಪ ವಿಭಾಗದ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಮುಹಮ್ಮದ್ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ ಗವಿರಾಜ್, ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ. ನಂಜಪ್ಪ, ಕುಮಾರಪ್ಪ, ಸುರೇಶ್ ಹಾಗೂ ಪಿ.ಸಿ ಮಧುಸೂದರ್, ಚಾಲಕ ಪ್ರಸನ್ನ ಕಾರ್ಯಚರಣೆ ತಂಡದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News