ಎಸ್ಯುಸಿಐನಿಂದ ಸಂತ್ರಸ್ತರಿಗಾಗಿ ನಿಧಿ ಸಂಗ್ರಹ
Update: 2018-08-19 18:04 GMT
ದಾವಣಗೆರೆ, ಆ.19: ಕೇರಳ ಹಾಗೂ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಾರ್ಟಿಯ ಕಾರ್ಯಕರ್ತರು ರವಿವಾರ ನಗರದಲ್ಲಿ ನಿಧಿ ಸಂಗ್ರಹಿಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಹಿರಿಯ ಪ್ರಗತಿಪರ ಹೋರಾಟಗಾರ ಮಲ್ಲೇಶ್ ಅವರು ದೇಣಿಗೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನೆರೆಸಂತ್ರಸ್ತ ಜನರಿಗೆ ದಾವಣಗೆರೆ ಜನರು ಸ್ವಯಂ ಪ್ರೇರಿತವಾಗಿ ಬಂದು ಹಣ, ಬಟ್ಟೆ, ನೀಡುವುದರ ಮೂಲಕ ನೆರವಾಗಬೇಕು. ಸ್ಪಂದಿಸುವ ಮೂಲಕ ಮಾನವೀಯತೆಯನ್ನು ಮೆರೆಯಬೇಕು ಎಂದು ಮನವಿ ಮಾಡಿದರು.
ಮಂಜುನಾಥ್ ಕೈದಾಳ, ರಾಘವೇಂದ್ರನಾಯ್ಕ, ತಿಪ್ಪೇಸ್ವಾಮಿ, ಮಧು ತೊಗಲೇರಿ, ಪರಶುರಾಮ್, ಭಾರತಿ, ನಾಗಜ್ಯೋತಿ, ಪ್ರಕಾಶ್ಎಲ್.ಎಚ್. ಹರಿಪ್ರಸಾದ್, ಸ್ಮೀತಾ, ನೇತ್ರ, ಗೋಪಾಲಕೃಷ್ಙ ಹಾಗೂ ವಿದ್ಯಾರ್ಥಿಗಳು ಇದ್ದರು.