ಓ ಮೆಣಸೇ...

Update: 2018-08-20 10:24 GMT

  ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದೆ ಟಿಕೆಟ್ ಪಡೆದವನು ನಾನು- ಪ್ರತಾಪ ಸಿಂಹ, ಸಂಸದ
ಪ್ರಾಥಮಿಕ ಜ್ಞಾನದ ಕೊರತೆಗೆ ಅದುವೇ ಕಾರಣ ಅಂತೀರಾ?

---------------------
  ರೈತರ ಆತ್ಮಹತ್ಯೆಗೆ ಸಾಲವೊಂದೇ ಕಾರಣವಲ್ಲ- ಶಿವಶಂಕರರೆಡ್ಡಿ, ಸಚಿವ.
ಭ್ರಷ್ಟ ರಾಜಕಾರಣಿಗಳು ಕೂಡ. 

---------------------
  ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಸಂಸದ.
ಕಾಂಗ್ರೆಸ್‌ನೊಳಗಿರುವವರೇ ಅದರಲ್ಲಿ ಯಶಸ್ವಿಯಾಗುತ್ತಿದ್ದಾರೆ. 

---------------------
  ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ನಿಮ್ಮ ಸಂಸ್ಕೃತಿ ಹೀನ ಭಾಷೆ ಅದನ್ನು ಸಾಬೀತು ಪಡಿಸಿದೆ. 

---------------------
  ದೇಶದ ಅಭಿವೃದ್ಧಿಗೆ ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆ ಅನಿವಾರ್ಯ- ಅಮಿತ್ ಶಾ, ಬಿಜೆಪಿ ಅಧ್ಯಕ್ಷ.
 ದೇಶ ಅಭಿವೃದ್ಧಿಯಲ್ಲಿ ಹಿಂದಕ್ಕೆ ಚಲಿಸುತ್ತಿರುವುದಕ್ಕೆ ಹೊಸ ಕಾರಣ.

 ---------------------
  ನರೇಂದ್ರ ಮೋದಿಯಂತಹ ಮೋಸಗಾರ ಪ್ರಧಾನಿಯಾಗಿರುವುದು ನಮ್ಮ ದುರಂತ- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.
ಅವರನ್ನು ಪ್ರಧಾನಿಯಾಗಿಸುವುದರಲ್ಲಿ ಕಾಂಗ್ರೆಸ್ ಕೊಡುಗೆ ದೊಡ್ಡದಿದೆ.
 ---------------------
  ಪ್ರಧಾನಿ ಮೋದಿಗೆ ಜನರನ್ನು ಬಹುಕಾಲ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
ಎಷ್ಟು ಕಾಲ ಸಾಧ್ಯವೋ ಅಷ್ಟು ಕಾಲ.

 ---------------------
  ರಾಜ್ಯ ಸಮಿಶ್ರ ಸರಕಾರವನ್ನು ಯಾರಿಂದಲೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ- ದೇವೇಗೌಡ, ಮಾಜಿ ಪ್ರಧಾನಿ.
 ತಮ್ಮನ್ನು ಹೊರತುಪಡಿಸಿ ಯಾರಿಗೂ ಸಾಧ್ಯವಿಲ್ಲ. 

---------------------
  ಇನ್ನು ಆರು ತಿಂಗಳಲ್ಲಿ ನಾ ನಿಮ್ಮವ ಎನ್ನಿಸಿಕೊಳ್ಳುವೆ - ಕುಮಾರಸ್ವಾಮಿ, ಮುಖ್ಯಮಂತ್ರಿ.
ಸರಕಾರ ಬರೇ ಆರು ತಿಂಗಳಷ್ಟೇ ಬಾಳುತ್ತದೆ ಅಂತಿದ್ದೀರಿ.

 ---------------------
  ಭಾರತ ಮತ್ತು ಚೀನಾ ಗಡಿಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಬುಲೆಟ್ ಫೈರ್ ಆಗಿಲ್ಲ - ನರೇಂದ್ರ ಮೋದಿ, ಪ್ರಧಾನಿ.

ಇದು ಭಾರತದ ಹೆಗ್ಗಳಿಕೆಯೋ, ಕುಗ್ಗಳಿಕೆಯೋ?
---------------------
ಆರೆಸ್ಸೆಸ್‌ನಲ್ಲಿ ಅನುಭವಕ್ಕೆ ಬಂದದ್ದನ್ನು ವಿಚಾರಕ್ಕೆ, ವಿಚಾರವನ್ನು ಶಬ್ದಕ್ಕೆ ಪರಿವರ್ತಿಸುವ ಕೆಲಸ ನಡೆಯುತ್ತಿದೆ - ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ. 
ಶಬ್ದದಿಂದ ಅದು ಹಿಂಸೆಯಲ್ಲಿ ಮುಕ್ತಾಯವಾಗುತ್ತದೆ. 

---------------------
  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂರುಕಾಲ ಬದುಕಬೇಕು- ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ.
ಮಾಜಿ ಮುಖ್ಯಮಂತ್ರಿಯಾಗಿ ಮಾತ್ರ ಬದುಕಬೇಕೆ?

---------------------
  ನನಗೀಗಾಗಲೇ ಕಾಂಗ್ರೆಸ್ ಪಕ್ಷದೊಂದಿಗೆ ಮದುವೆಯಾಗಿದೆ- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ.
ವರನಿಗಿಂತ ವಧುವಿನ ವಯಸ್ಸು ತುಂಬಾ ಜಾಸ್ತಿಯಾಯಿತು.

 ---------------------
  ನಾನು ಪಂಜರದ ಗಿಳಿ - ಬಸವರಾಜ ಹೊರಟ್ಟಿ, ವಿ.ಪ.ಸಭಾಪತಿ.
ಅದು ನೀವೇ ಆರಿಸಿಕೊಂಡ ಪಂಜರ. 

---------------------
  ಮಹಾಮಳೆ ಪರಿಹಾರ ಕಾರ್ಯಕ್ಕೆ ಹಣಕಾಸಿನ ಕೊರತೆಯಿಲ್ಲ- ಆರ್.ವಿ.ದೇಶಪಾಂಡೆ, ಸಚಿವ
 ಆ ಪರಿಹಾರದ ಹಣ ತಲುಪಿಸುವವರ ಕೊರತೆಯಿದೆ. 

---------------------
  ಭಾರತ ವಿಶ್ವಕ್ಕೆ ಗುರುವಾಗಬೇಕು - ಸುನೀಲ್ ಕುಮಾರ್, ಶಾಸಕ
ಸದ್ಯಕ್ಕೆ ವಿಶ್ವದ ಪಾಲಿನ ಕುರು ಆಗುವ ಕಡೆಗೆ ಹೆಜ್ಜೆಯಿಡುತ್ತಿದೆ. 

---------------------
  ಧರ್ಮವೇ ಭಾರತದ ವಿಶೇಷತೆ- ಮೋಹನ್ ಭಾಗವತ್,  ಆರೆಸ್ಸೆಸ್ ಮುಖಂಡ
ಅದಕ್ಕೇ ಭಾರತ ಹಿಂದುಳಿದಿರುವುದು. 

---------------------
  ಮಹಾದಾಯಿ ತೀರ್ಪು ಸಮಾಧಾನ ತಂದಿದೆ - ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ
ರೈತರಿಗೂ ಸಮಾಧಾನ ತರಬೇಡವೇ?
---------------------
  ಅಧಿಕಾರ ಶಾಶ್ವತವಲ್ಲ ಇಂದು ಬರುತ್ತದೆ, ನಾಳೆ ಹೋಗುತ್ತದೆ.- ಯು.ಟಿ.ಖಾದರ್, ಸಚಿವ
ಶಾಶ್ವತವಲ್ಲ ಎಂದು ಗೊತ್ತಿರುವುದರಿಂದಲೇ ಅಧಿಕಾರಕ್ಕೆ ಬಂದಾಕ್ಷಣ ರಾಜಕಾರಣಿಗಳು ದೋಚಲು ಆರಂಭಿಸುವುದು.

 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...