ಈದುಲ್ ಅಝ್ ಹಾ ಆಚರಣೆ ಕೈಬಿಟ್ಟು ಕೇರಳ ಸಂತ್ರಸ್ತರಿಗೆ ನೆರವಾಗಿ: ನಾಸಿರ್ ಮಅದನಿ ಮನವಿ

Update: 2018-08-20 11:00 GMT

ಬೆಂಗಳೂರು, ಆ. 20: ಈ ಬಾರಿಯ ಈದುಲ್ ಅಝ್ ಹಾ ಆಚರಣೆಯನ್ನು ಸಂಪೂರ್ಣ ಕೈಬಿಟ್ಟು ಮುಖ್ಯಮಂತ್ರಿಯ ಸಂತ್ರಸ್ತ ಪರಿಹಾರ ನಿಧಿಗೆ ಗರಿಷ್ಠ ದೇಣಿಗೆ ನೀಡಬೇಕೆಂದು ಪಿಡಿಪಿ ನಾಯಕ ಅಬ್ದುನ್ನಾಸರ್ ಮಅದನಿ ಮನವಿ ಮಾಡಿದ್ದಾರೆ.

ತನ್ನ ಫೇಸ್ಬುಕ್ ಫುಟದಲ್ಲಿ ವೀಡಿಯೊವೊಂದರಲ್ಲಿ ಮಾತನಾಡಿರುವ ಅವರು, ಆಚರಣೆಯನ್ನು ಕೈಬಿಡಲು ಪ್ರತಿಯೊಂದು ಮೊಹಲ್ಲಾದ ಪದಾಧಿಕಾರಿಗಳು ಮುಂದಾಗಬೇಕೆಂದು ಆಗ್ರಹಿಸಿದರು. ಕೇರಳವು ಇತಿಹಾಸದಲ್ಲಿಯೇ ಅತಿದೊಡ್ಡ ದುರಂತವನ್ನು ಎದುರಿಸುತ್ತಿದೆ. ಇದರಿಂದ ಪುನಶ್ಚೇತನಕ್ಕಾಗಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News