ಹನೂರು: ವೃದ್ದೆಯ ಮೇಲೆ ಆನೆ ದಾಳಿ

Update: 2018-08-23 18:12 GMT

ಹನೂರು,ಆ.23: ಮಲೈಮಹದೇಶ್ವರ ಬೆಟ್ಟದ ಸಮೀಪದ ಕಾಡಂಚಿನ ಪ್ರದೇಶದಲ್ಲಿ ಇರುವ ನಾಗಮಲೆಗೆ ತೆರಳಿ ದೇವರ ದರ್ಶನ ಪಡೆದು ಹಿಂದಿರುಗುತ್ತಿದ್ದಾಗ ವೃದ್ದೆಯ ಮೇಲೆ ಆನೆ ದಾಳಿ ಮಾಡಿದ ಘಟನೆ ನಡೆದಿದೆ.

ಮಹದೇಶ್ವರಬೆಟ್ಟಕ್ಕೆ ಮಂಡ್ಯ ಜಿಲ್ಲೆಯ ಪಾಂಡುವಪುರ ತಾಲೂಕಿನ ಡಿಂಕ ಗ್ರಾಮದಿಂದ ಆಗಮಿಸಿ ದರ್ಶನ ಪಡೆದು, ನಂತರ ನಾಗಮಲೆಗೆ ತೆರಳಿ ಪೂಜೆ ಸಲ್ಲಿಸಿ ಹಿಂದಿರುಗುತ್ತಿದ್ದಾಗ ಇಂಡಿಗನತ್ತ ಗ್ರಾಮದ ಬಳಿ ಆನೆಯೊಂದು ಲಕ್ಷ್ಮಮ್ಮ(65) ರ ಮೇಲೆ ದಾಳಿ ನಡೆಸಿದ್ದು, ಅವರನ್ನು ಚಿಕಿತ್ಸೆಗಾಗಿ ಕೊಳ್ಳೇಗಾಲ ಆಸ್ಪತ್ರೆಗೆ ಕೊಂಡೊಯ್ದು, ನಂತರ ಮೈಸೂರು ಆಸ್ಪತ್ರೆಗೆ ರವಾನಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News