×
Ad

ಆ.29 ಕ್ಕೆ ವಿಶ್ವವಿಖ್ಯಾತ ಮೈಸೂರು ದಸರಾ ಗಜಪಯಣ ?

Update: 2018-08-27 23:17 IST

ಮೈಸೂರು,ಆ.27: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಕೊಡಗು ಜಿಲ್ಲೆಯ ನೆರೆ ಹಾವಳಿಯಿಂದ ಮುಂದೂಡಿಕೆಯಾಗಿದ್ದ ಗಜಪಯಣ ಇದೀಗ ಆಗಸ್ಟ್ 29ಕ್ಕೆ ನಿಗದಿಯಾಗಿದೆ ಎನ್ನಲಾಗಿದೆ.

12 ಆನೆಗಳ ಪೈಕಿ 6 ಆನೆಗಳ ತಂಡ ಮೈಸೂರಿಗೆ ಆಗಸ್ಟ್ 29 ರಂದು ಮೈಸೂರಿಗೆ ಹೆಜ್ಜೆ ಹಾಕಲಿವೆ. ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಬಳಿಯ ನಾಗಾಪುರ ಬಳಿ ಜಿಲ್ಲಾಡಳಿತದಿಂದ ಗಜ ಪಡೆಯನ್ನು ಸ್ವಾಗತಿಸಲಾಗುತ್ತಿದ್ದು, ಅಂದು ಅರ್ಜುನ ನೇತೃತ್ವದ ಗಜ ಪಡೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಣ್ಣು ಬೆಲ್ಲ ನೀಡಿ ಸ್ವಾಗತ ಕೋರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆಗಸ್ಟ್ 28 ಕ್ಕೆ ಸಿಎಂ ನೇತೃತ್ವದಲ್ಲಿ ದಸರಾ ಉನ್ನತ ಕಮಿಟಿ ಸಭೆ ನಡೆಯಲಿದೆ. ಈ ಹಿಂದೆ ಆಗಸ್ಟ್ 23 ಕ್ಕೆ ಗಜಪಯಣ ನಿಗದಿಯಾಗಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ನೆರೆ ಹಾವಳಿಯಿಂದ ಆ. 23 ರಂದು ನಿಗದಿಯಾಗಿದ್ದ ಗಜಪಯಣವನ್ನು ಮುಂದೂಡಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News