ಸಾಲಬಾಧೆ: ಯುವಕ ಆತ್ಮಹತ್ಯೆ

Update: 2018-08-27 18:07 GMT

ಮಂಡ್ಯ, ಆ.27: ಸಾಲವನ್ನು ತೀರಿಸಲು ಸಾಧ್ಯವಾಗದೆ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ.

ಚಿಕ್ಕ ಮೊಗಣ್ಣ ಅವರ ಪುತ್ರ ಗುರುಮಲ್ಲಯ್ಯ(26) ಆತ್ಮಹತ್ಯೆ ಮಾಡಿಕೊಂಡವ. ಈತ ಮೂರು ಲಕ್ಷ ರೂ. ಸಾಲ ಮಾಡಿಕೊಂಡು ತೀರಿಸಲಾಗದೆ ತಾಯಿ ಜತೆ ಜಗಳಮಾಡಿ ಮನೆ ಬಿಟ್ಟು ಹೋಗಿದ್ದ ಎನ್ನಲಾಗಿದೆ.

ಗುರುಮಲ್ಲಯ್ಯನ ಹುಡುಕಾಟ ನಡೆಸುತ್ತಿದ್ದಾಗ, ಆತನ ಶವ ಜಮೀನಿನ ಬಳಿ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News