ಕೊಳ್ಳೇಗಾಲ ನಗರಸಭೆಯ ಕಿಂಗ್ಮೇಕರ್ ನಾವೇ ಆಗುತ್ತೇವೆ; ಸಚಿವ ಎನ್.ಮಹೇಶ್
Update: 2018-08-29 16:50 GMT
ಕೊಳ್ಳೇಗಾಲ,ಆ.29: ನಗರಸಭೆ ಅಧಿಕಾರವನ್ನು ಹಿಡಿಯುತ್ತೇವೆ. ನಗರಸಭೆಯ ಕಿಂಗ್ಮೇಕರ್ ನಾವೇ ಆಗುತ್ತೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ 10,11,12,13 ನೇ ವಾರ್ಡ್ಗಳಲ್ಲಿ ಸಚಿವ ಬಿಎಸ್ಪಿ ಅಭ್ಯರ್ಥಿಗಳ ಪರ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. 'ನಾವು ಗೆಲುವು ಸಾಧಿಸಿದರೆ ನಿಮ್ಮ ವಾರ್ಡಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತೇವೆ. ನಮ್ಮ ಗೆಲುವಿಗೆ ನೀವು ಬಿಎಸ್ಪಿ ಪಕ್ಷದ ಆನೆ ಗುರುತಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭ ಬಿಎಸ್ಪಿ ಪಕ್ಷದ ಅಭ್ಯರ್ಥಿಗಳಾದ ಪವಿತ್ರರಮೇಶ್, ಪ್ರತಿಭಕಾಂತ್ ಮತ್ತು ಶಿವಲಿಂಗಯ್ಯಗೌಡ, ವೆಂಕಟೇಶ್, ನಿಂಗರಾಜು, ಶ್ರೀನಿವಾಸ್, ಇಂದ್ರೇಶ್, ಕಿರಣ್, ರಾಮಕೃಷ್ಣ, ಸಂಪತ್ಕುಮಾರ್ ಮುಂತಾದವರು ಹಾಜರಿದ್ದರು.