ಮೂಡಿಗೆರೆ: ಧಾರ್ಮಿಕ ವಿದ್ವಾಂಸ ಸೈಯದ್ ಭಾಫಖಿ ತಂಙಳ್‍ಗೆ ಸನ್ಮಾನ

Update: 2018-08-31 18:29 GMT

ಮೂಡಿಗೆರೆ, ಆ.31: ಅಖಿಲ ಭಾರತ ಸುನ್ನಿ ವಿದ್ಯಾಭ್ಯಾಸ ಬೋರ್ಡ್‍ನ ರಾಷ್ಟ್ರೀಯ ಅಧ್ಯಕ್ಷ, ಸಮಸ್ತ ಕೇರಳ ಸುನ್ನಿ ಜಂಇಯತುಲ್ ಉಲಮಾದ ಉಪಾಧ್ಯಕ್ಷ, ಮರ್ಕಘೂಸ್ಸಖಾಫತಿ ಸುನ್ನಿಯಾದ ಅಧ್ಯಕ್ಷ ಧಾರ್ಮಿಕ ವಿದ್ವಾಂಸ ಶೈಖುನಾ ಸೈಯದ್ ಅಲೀ ಭಾಫಖಿ ತಂಙಳ್ ಅವರು ಗುರುವಾರ ಪಟ್ಟಣದ ಹೊರವಲಯದ ಬಿಳಗುಳದಲ್ಲಿ ತಮ್ಮ ಪುತ್ರನ ಮನೆಗೆ ಆಗಮಿಸಿದ್ದರು.

ಈ ವೇಳೆ ಅವರಿಗೆ ಮೂಡಿಗೆರೆ ಎಸ್‍ಎಸ್‍ಎಫ್ ಮತ್ತು ಎಸ್‍ವೈಎಸ್ ಮುಖಂಡರಾದ ಮಹಮ್ಮದ್, ಸುಲೈಮಾನ್, ಅಶ್ರಫ್ ಸಅದಿ, ಖಾಲಿದ್, ಇಬ್ರಾಹಿಂ, ಅಬೂಬಕರ್, ಅಬ್ದುಲ್ ಮಜೀದ್ ಅಝ್ಹರಿ ಅವರು ಶಾಲು ಹೊದಿಸಿ ಗೌರವಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News