ಕೊಪ್ಪ: ಮಿತಿ ಮೀರಿ ಸರಕು ಸಾಗಣೆ; ಲಾರಿ ವಶಕ್ಕೆ

Update: 2018-09-02 12:51 GMT

ಕೊಪ್ಪ, ಸೆ.2:  ಮಿತಿಗಿಂತ ಜಾಸ್ತಿ ತೂಕದ ಟಿಂಬರ್ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಕೊಪ್ಪ ಪೊಲೀಸರು ವಶಕ್ಕೆಪಡೆದು ಮುಂದಿನ ಕ್ರಮಕ್ಕಾಗಿ ಚಿಕ್ಕಮಗಳೂರು ಪ್ರಾದೇಶಿಕ ಸಂಚಾರಿ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.

2006ರ ಜಿಲ್ಲಾಧಿಕಾರಿಗಳ ಆದೇಶದಂತೆ ಮಲೆನಾಡು ಭಾಗದಲ್ಲಿ ರಾಜ್ಯ, ಜಿಲ್ಲಾ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಜೂನ್1ರಿಂದ ಸೆಪ್ಟೆಂಬರ್ 30ರವರೆಗೆ 15 ಟನ್‍ಗಿಂತ ಹೆಚ್ಚು ತೂಕದ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಅತೀ ಭಾರದ ವಾಹನಗಳ ಓಡಾಟದಿಂದ ರಸ್ತೆಗಳಿಗೆ ಹಾನಿಯಾಗಿ ವಾಹನ ಸಂಚಾರಕ್ಕ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ. ಆದರೆ ಕೆಲವು ವಾಹನಗಳು ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತವೆ. ಕೊಪ್ಪದ ದಕ್ಷ ಪೊಲೀಸ್ ಅಧಿಕಾರಿ ಪಿಎಸ್‍ಐ ಪುಟ್ಟೇಗೌಡ ನೇತೃತ್ವದ ತಂಡ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಎರಡು ಟಿಂಬರ್ ಲಾರಿಗಳನ್ನು ವಶಕ್ಕೆ ತಗೊಂಡು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News