31 ಮಂದಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Update: 2018-09-03 16:22 GMT

ಬೆಂಗಳೂರು, ಸೆ.3: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2018-19 ನೆ ಸಾಲಿನ 31 ಜನರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದೆ. ಪ್ರಾಥಮಿಕ ಶಾಲೆಯ 20, ಪ್ರೌಢಶಾಲಾ ವಿಭಾಗದಿಂದ 10 ಹಾಗೂ ಪ್ರೌಢಶಾಲಾ ವಿಭಾಗದಿಂದ ಒಬ್ಬ ಶಿಕ್ಷಕರಿಗೆ ವಿಶೇಷ ಪ್ರಶಸ್ತಿ ಸೇರಿದಂತೆ ಒಟ್ಟು 31 ಮಂದಿಯನ್ನು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಾಥಮಿಕ ಶಾಲಾ ವಿಭಾಗ: ರಮೇಶ್ ಎಂ. (ಸಹ ಶಿಕ್ಷಕ, ಪುರ ಲಕ್ಕೂರು ಸಂಕೀರ್ಣ, ಮಾಲೂರು ತಾ.ಕೋಲಾರ ಜಿ.), ಪ್ರೆಸಿಲ್ಲಾ ಶಾಂತಕುಮಾರಿ (ಸಹ ಶಿಕ್ಷಕಿ, ಪೂರ್ಣಾಪುರ, ಬೆಂಗಳೂರು ಉತ್ತರ ತಾ.), ಹುಲ್ಲಪ್ಪ ಎಸ್. ವನಕಿಹಾಳ (ಸಹ ಶಿಕ್ಷಕ, ಈಚನಾಳ ತಾಂಡ, ಲಿಂಗಸುಗೂರು ತಾ. ರಾಯಚೂರು ಜಿ.), ಸತೀಶ್ ಸಿ.ಎನ್.(ಸಹ ಶಿಕ್ಷಕ, ಮುಳ್ಳೂರು, ಸೋಮವಾರಪೇಟೆ ತಾ. ಕೊಡಗು ಜಿ.), ಶಂಕರ್ (ಸಹ ಶಿಕ್ಷಕ, ಮಧ್ಯ, ಮಂಗಳೂರು ಉತ್ತರ ವಲಯ, ದ.ಕ. ಜಿ.), ಜಿ.ಕೆ. ಶ್ರೀರಾಮಯ್ಯ (ಸಹ ಶಿಕ್ಷಕ, ಉಪ್ಪಿನಹಳ್ಳಿ ತಿಪಟೂರು ತಾ. ತುಮಕೂರು ಜಿ.), ಜೈರಾಮ ಎಂ. ಭಟ್ಟ (ಸಹ ಶಿಕ್ಷಕ, ಕದ್ರಾ, ಕಾರವಾರ ಜಿ.), ಬೇಬಿ ಬಿ. (ಮುಖ್ಯ ಶಿಕ್ಷಕಿ, ಸರಳೇಬೆಟ್ಟು, ಉಡುಪಿ ತಾ. ಜಿ.), ಯಮುನಾ ಪಿ. ನಾಯ್ಕ (ಮುಖ್ಯ ಶಿಕ್ಷಕಿ, ಹಿತ್ಲಹಳ್ಳಿ ಯಲ್ಲಾಪುರ ತಾ.), ಸಂತೋಷ ಮಡಿವಾಳಪ್ಪ (ಸಹ ಶಿಕ್ಷಕ, ಹಣಮಾಪುರ, ಗೋಕಾಕ್ ತಾ.)

ಮಹಾಲಕ್ಷ್ಮಮ್ಮ (ಭಡ್ತಿ ಮುಖ್ಯ ಶಿಕ್ಷಕಿ, ಮಹಾದೇವರಹಳ್ಳಿ, ಅರಸೀಕರೆ ತಾ. ಹಾಸನ), ಸಿ. ತಿಮ್ಮೇಶಪ್ಪ (ಸಹ ಶಿಕ್ಷಕ, ಗಾಂಧೀ ಗ್ರಾಮ, ನರಸಿಂಹರಾಜಪುರ ತಾ. ಚಿಕ್ಕಮಗಳೂರು), ಜಿ. ರೇವಣ್ಣ (ಭಡ್ತಿ ಮುಖ್ಯ ಶಿಕ್ಷಕ, ಸಿಂಗೇನಹಳ್ಳಿ, ಹೊಳಲ್ಕೆರೆ ತಾ. ಚಿತ್ರದುರ್ಗ), ಬಾಬು ಗಂಗು ಚವ್ಹಾಣ (ಸಹ ಶಿಕ್ಷಕ, ಮುದಾಳ, ಯಾದಗಿರಿ ತಾ.), ಮಲ್ಲೇಶ ಡಿ. ಹರಿವಾಣ (ಸಹ ಶಿಕ್ಷಕ, ಅಡವೀ ಸೋಮಾಪುರ, ಗದಗ ತಾ.), ನೀಲಪ್ಪ ಟಿ. (ಮುಖ್ಯ ಶಿಕ್ಷಕ, ಇಟಕಾಲ, ಸೇಡಂ ತಾ. ಕಲಬುರಗಿ), ವೆಂಕಟರೆಡ್ಡಿ ಬಸವರೆಡ್ಡಿ (ಸಹ ಶಿಕ್ಷಕ, ಇಮ್ಮಡಿ, ಕೊಪ್ಪಳ ತಾ.), ರೇವಣ್ಣಪ್ಪ ಎಂ.ಆರ್. (ಸಹ ಶಿಕ್ಷಕ, ಭದ್ರಾವತಿ ತಾ. ಶಿವಮೊಗ್ಗ), ವಾಯ್ ಆರ್. ಭೂತಾಳಿ (ಸಹ ಶಿಕ್ಷಕಿ, ಗುಂಡನಪರ್ಲೆ ಬಾಗಲಕೋಟೆ ತಾ.), ಶಾಂತವ್ವ ಹ. ಶಿವಣ್ಣನವರ (ಸಹ ಶಿಕ್ಷಕಿ, ಯರಗುಪ್ಪಿ ತಾ.)

ಪ್ರೌಢಶಾಲಾ ಶಿಕ್ಷಕರು: ಸೌಮ್ಯ ಜೈನ್(ಸಂಗೀತ ಶಿಕ್ಷಕಿ, ವರುಣಾ, ಮೈಸೂರು), ಎಸ್. ಯಾಕೂಬ್(ಸಹಶಿಕ್ಷಕ, ಬೆಳ್ತಂಗಡಿ ತಾ.), ಪಿ.ಎನ್. ಪ್ರಕಾಶ್ ರಾವ್(ಮುಖ್ಯ ಶಿಕ್ಷಕ, ಆಯುರ್ವೇದ ಭೂಷಣ ಎಂ.ವಿ.ಶಾಸಿ ಪ್ರೌಢಶಾಲೆ, ಇನ್ನ, ಕಾರ್ಕಳ, ಉಡುಪಿ), ಶಿವಕುಮಾರ್(ಸಹ ಶಿಕ್ಷಕ, ಎಸ್‌ಎಸ್‌ಆರ್‌ಎಚ್‌ಎಸ್ ಪ್ರೌಢಶಾಲೆ, ಸಿದ್ದಗಂಗಾ ಮಠ, ತುಮಕೂರು), ಚಿದಾನಂದ ಸ್ವಾಮಿ(ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1, ಸರಕಾರಿ ಮದಕರಿ ನಾಯಕನ ಕೋಟೆ, ಹಿರಿಯೂರು ತಾ., ಚಿತ್ರದುರ್ಗ), ಕೃಷ್ಣ ಮೂರ್ತಿ ಎಲ್.ಭಟ್ಟ(ಸಹ ಶಿಕ್ಷಕ, ಗಣೇಶನಗರ, ಶಿರಸಿ), ಕೆ.ಎನ್.ಮಂಜುನಾಥ(ಆಂಗ್ಲ ಭಾಷಾ ಸಹ ಶಿಕ್ಷಕರು, ಪೊನ್ನಂಪೇಟೆ, ವಿರಾಜಪೇಟೆ ತಾ. ಕೊಡಗು)

ಎಸ್.ಎಸ್.ಬಿರಾದಾರ್(ದೈಹಿಕ ಶಿಕ್ಷಣ ಶಿಕ್ಷಕ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು), ಬಸವರೆಡ್ಡಿ ಅಡಿವೆಪ್ಪ ರಂಗಣ್ಣವರ(ಸಹ ಶಿಕ್ಷಕರು, ಕೊಂಡಿಕೊಪ್ಪ, ನವಲಗುಂದ, ಧಾರವಾಡ), ರಂಗನಾಥಪ್ಪ(ಸಹಶಿಕ್ಷಕ, ಐಡಿ ಹಳ್ಳಿ, ಮಧುಗಿರಿ ಶೈಕ್ಷಣಿಕ ಜಿಲ್ಲೆ), ಬಿ.ಸೈಯದ್ ಹುಸೇನ್(ಸಹ ಶಿಕ್ಷಕ, ಕಾರಿಗನೂರು, ಹೊಸಕೋಟೆ ತಾ., ಬಳ್ಳಾರಿ)

ಪ್ರಶಸ್ತಿಯನ್ನು ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಎನ್. ಮಹೇಶ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಅನಂತಕುಮಾರ್ ಮತ್ತು ನಿರ್ಮಲಾ ಸೀತಾರಾಮನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕ ರೋಷನ್ ಬೇಗ್ ಅಧ್ಯಕ್ಷತೆ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News