ಲೋಕಾಯುಕ್ತ ಬಲಗೊಳಿಸಿ: ಸೆ.6ಕ್ಕೆ ವಿಚಾರ ಸಂಕಿರಣ

Update: 2018-09-03 18:05 GMT

ಬೆಂಗಳೂರು, ಸೆ.3: ಲೋಕಾಯುಕ್ತ ಬಲಗೊಳಿಸಿ ಕುರಿತ ವಿಚಾರ ಸಂಕಿರಣ ಸೆ.6ರಂದು ಬೆಂಗಳೂರಿನ ಶಾಸಕ ಭವನದಲ್ಲಿ ನಡೆಯಲಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತಿಳಿಸಿದೆ.

ಅಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಸೇರಿದಂತೆ ಪ್ರಮುಖರು ವಿಚಾರ ಮಂಡನೆ ಮಾಡಲಿದ್ದಾರೆ.

ಚುನಾವಣೆಗೆ ಮೊದಲು ರಾಜ್ಯದ ಬಹುತೇಕ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಲೋಕಾಯುಕ್ತ ಬಲಗೊಳಿಸುತ್ತೇವೆ ಎಂದಿದ್ದರು. ಆದರೆ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಹೊಸ ರಾಜ್ಯ ಸರಕಾರ ಆಡಳಿತ ನಡೆಸಿ ನೂರು ದಿನಗಳ ಮೇಲಾಗಿದೆ. ಆದರೂ, ಲೋಕಾಯುಕ್ತದ ಸ್ಥಿತಿ-ಗತಿಯ ಕುರಿತು ಯಾರು ಮಾತನಾಡುತ್ತಿಲ್ಲ. ಅಷ್ಟೇ ಅಲ್ಲದೆ, ಆಡಳಿತದಲ್ಲಿ ಲಂಚ ಮತ್ತು ಕರ್ತವ್ಯಲೋಪ ಹಿಂದಿಗಿಂತ ಹೆಚ್ಚು ಈಗ ನಡೆಯುತ್ತಿದೆ. ಭ್ರಷ್ಟರಿಗೆ ಯಾವುದೇ ಸಂಸ್ಥೆಯ ಭಯ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದು ವೇದಿಕೆ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News