ಮಡಿಕೇರಿ: ಮರಕ್ಕೆ ಬೈಕ್ ಢಿಕ್ಕಿ; ವ್ಯಕ್ತಿ ಸಾವು
Update: 2018-09-05 18:13 GMT
ಮಡಿಕೇರಿ ಸೆ.5 : ಮರವೊಂದಕ್ಕೆ ಬೈಕ್ ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ಹುದಿಕೇರಿ ಗ್ರಾಮದಲ್ಲಿ ನಡೆದಿದೆ.
ಹುದಿಕೇರಿಯ ಏಳನೇ ಮೈಲಿನ ನಿವಾಸಿ ದಿ.ನಾಚಪ್ಪನವರ ಮಗ ನೆಲ್ಲಮಾಡ ಚೇತನ್(31) ಎಂಬವರೆ ಸಾವನ್ನಪ್ಪಿರುವ ವ್ಯಕ್ತಿ.
ಹುದಿಕೇರಿಯ ತನ್ನ ಮನೆಗೆ ಬರುತ್ತಿದ್ದ ಚೇತನ್ರ ಹತೋಟಿ ತಪ್ಪಿದ ಬೈಕ್ ರಸ್ತೆ ಬದಿಯ ಮರವೊಂದಕ್ಕೆ ಢೀಕ್ಕಿಯಾಗಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಚೇತನ್ರನ್ನು ತಕ್ಷಣ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.