ಚಾಮರಾಜನಗರ: ಕಾಲು ಜಾರಿ ನಾಲೆಗೆ ಬಿದ್ದು ಯುವಕ ಮೃತ್ಯು

Update: 2018-09-06 16:29 GMT

ಚಾಮರಾಜನಗರ,ಸೆ.6: ಕಾಲು ಜಾರಿ ನಾಲೆಗೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಸಂತೇಮರಹಲ್ಳಿ ಸಮೀಪ ಇರುವ ಕಬಿನಿ ನಾಲೆಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಕಬಿನಿ ನಾಲೆಯಲ್ಲಿ ಯಳಂದೂರು ತಾಲೂಕಿನ ಯರಿಯೂರು ಗ್ರಾಮದ 18 ವರ್ಷದ ವಿನೋದ್  ಮೃತಪಟ್ಟ ಯುವಕ. 

ವಿನೋದ್ ಗಾರೆ ಕೆಲಸ ಮಾಡಲು ಬಂದಿದ್ದು, ಬಹಿರ್ದೆಸೆಗೆಂದು ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ  ಭೇಟಿ ಕೊಟ್ಟ ಪೊಲೀಸರು ನಾಲೆಯಲ್ಲಿ ವಿನೋದನ ಶವವನ್ನು ಪತ್ತೆ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News