ಜಗಳೂರು: ಟ್ರ್ಯಾಕ್ಟರ್ ಪಲ್ಟಿ; ಚಾಲಕ ಮೃತ್ಯು

Update: 2018-09-07 12:56 GMT

ಜಗಳೂರು,ಸೆ.7: ಮರಳು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಟ್ರ್ಯಾಕ್ಟರ್ ಚಾಲಕ ಸುನೀಲ್‍ ಕುಮಾರ್ (24) ಎಂದು ಗೊತ್ತಾಗಿದೆ.

ಬಿಳಿಚೋಡು ಹೊರ ವಲಯ ಚಿತ್ರದುರ್ಗ ತಾಲೂಕಿನ ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಬಿಳಿಚೋಡು ಬಳಿ ವೇಗವಾಗಿ ಬರುತ್ತಿದ್ದಾಗ ಮಗುಚಿ ಬಿದ್ದಿದ್ದು, ಪರಿಣಾಮ ಸುನೀಲ್‍ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News