ಮಂಡ್ಯ: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
Update: 2018-09-07 15:35 GMT
ಮಂಡ್ಯ, ಸೆ.7: ಶ್ರೀರಂಗಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿ ಗುಜರಾತ್ ಮೂಲದ ವ್ಯಕ್ತಿಯೋರ್ವನ ಕೊಳೆತ ಶವ ಪತ್ತೆಯಾಗಿದೆ.
ಎರಡು ದಿನಗಳಿಂದ ನಿಂತಿದ್ದ ಲಾರಿಯಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲಿಸಿದಾಗ ಲಾರಿಯಲ್ಲಿ ಕೊಳೆತ ಶವ ಇರುವುದು ಬೆಳಕಿಗೆ ಬಂದಿತು.
ಶವದ ಮೈಮೇಲೆ ಗಾಯದ ಗುರುತು ಇರುವುದರಿಂದ ಕೊಲೆ ಪ್ರಕರಣವಿರಬಹುದೆಂದು ಶಂಕಿಸಲಾಗಿದೆ. ಶ್ವಾನದಳ ಭೇಟಿ ನೀಡಿತ್ತು. ಶ್ರೀರಂಗಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.