ಮಂಡ್ಯ: ವಿಸಿ ನಾಲೆಯಲ್ಲಿ ಯುವಕನ ಶವ ಪತ್ತೆ

Update: 2018-09-10 17:56 GMT

ಮಂಡ್ಯ, ಸೆ.10: ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಯಲ್ಲಿ ಸೋಮವಾರ ಮಧ್ಯಾಹ್ನ ಯುವಕನ ಶವ ಪತ್ತೆಯಾಗಿದೆ.

ನಾಲೆಯಲ್ಲಿ ದೊರೆತ ಶವ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ನಿವಾಸಿ ಗೋಪಾಲ ಅವರ ಪುತ್ರ ಉದಯಕಿರಣ(22) ಅವರದ್ದು.
ರವಿವಾರ ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ಉದಯಕಿರಣ ಹೊರಹೋಗಿದ್ದು, ಸಂಜೆ ವೇಳೆಗೆ ಆತನ ಚಪ್ಪಲಿ, ಶರ್ಟ್ ಹಾಗೂ ಸಿಮ್ ಇಲ್ಲದ ಖಾಲಿ ಮೊಬೈಲ್ ಫೋನ್ ಕನಗನಮರಡಿ ಸಮೀಪ ವಿಸಿ ನಾಲೆ ಬಳಿ ಪತ್ತೆಯಾಗಿದ್ದವು. ನಂತರ, ಪೋಷಕರು ಪಾಂಡವಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ಆದರೆ, ಸೋಮವಾರ ಮಧ್ಯಾಹ್ನ ಉದಯಕಿರಣನ ಶವ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಯಲ್ಲಿ  ಪತ್ತೆಯಾಗಿದ್ದು. ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ. 

ಈ ಸಂಬಂಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News