ನಮ್ಮ ಶಾಸಕರನ್ನು ಟಚ್ ಮಾಡಲಿ: ಕಾಂಗ್ರೆಸ್ ನಾಯಕರಿಗೆ ಯಡಿಯೂರಪ್ಪ ಸವಾಲು

Update: 2018-09-13 11:42 GMT

ಬೆಂಗಳೂರು, ಸೆ.13: ನಮ್ಮ 104 ಶಾಸಕರನ್ನು ಮುಟ್ಟಲಿ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಬಿಜೆಪಿಯ 5 ಶಾಸಕರನ್ನು ಟಚ್ ಮಾಡಿದ್ದೇವೆ ಎಂಬ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ನೀಡಿದ್ದ ಹೇಳಿಕೆ ಕುರಿತು
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದೇಕೆ ನಾವು 104 ಜನರಿದ್ದೇವೆ, ಎಲ್ಲರನ್ನೂ ಟಚ್ ಮಾಡಲಿ ಎಂದರು.

ಮೈತ್ರಿ ಸರಕಾರದ ವಿರುದ್ಧ ಯಾವುದೇ ರೀತಿಯ ಹೇಳಿಕೆ ನೀಡದಂತೆ ನಮ್ಮ ಎಲ್ಲ ಮುಖಂಡರಿಗೆ‌ ತಿಳಿಸಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗ ಕರೆ ಮಾಡಿದ್ದರು. ಬಹಿರಂಗ ಹೇಳಿಕೆ ನೀಡಬಾರದೆಂದು ಸೂಚನೆ ನೀಡಿದ್ದಾರೆ. ಹೀಗಾಗಿ, ನಮ್ಮ ಪಕ್ಷದ ಯಾವುದೇ ಶಾಸಕರು ಬಹಿರಂಗ ಹೇಳಿಕೆ ನೀಡಲ್ಲ ಎಂದರು. 

ಸಮಸ್ಯೆ ಇರುವುದು, ಗೊಂದಲ ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ. ಅವರ ಗೊಂದಲವನ್ನು ಅವರು ಪರಿಹರಿಸಿಕೊಳ್ಳುವುದನ್ನು ಬಿಟ್ಟು, ಬಿಜೆಪಿ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News