ಸುಂಟಿಕೊಪ್ಪ: ನೇಣು ಬಿಗಿದು ಬಾಲಕ ಆತ್ಮಹತ್ಯೆ

Update: 2018-09-14 13:22 GMT

ಸುಂಟಿಕೊಪ್ಪ, ಸೆ.14: ಬಾಲಕನೋರ್ವ ಮನೆಯ ಹಿಂಬದಿಯ ಸೀಬೆಹಣ್ಣಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಘಟನೆ ನಡೆದಿದೆ.

ಗದ್ದೆಹಳ್ಳದ ಯಂಕನ ತಮ್ಮಯ್ಯ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಶೇಖರ ಎಂಬವರ ಪುತ್ರ ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಪ್ರವೀಣ(11) ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಸೆ.14 ರಂದು ಶಾಲೆಗೆ ತೆರಳದೆ ಮನೆಯಲ್ಲಿ ತಾಯಿಯೊಂದಿಗೆ ಉಳಿದುಕೊಂಡಿದ್ದು, ತಾಯಿಯು ಮದ್ಯಾಹ್ನ ಕಾರ್ಯನಿಮಿತ್ತ ಹೊರಗಡೆ ತೆರಳಿದ ವೇಳೆ ಬಾಲಕನು ಮನೆಯ ಹಿಂಬಾಗದ ಸೀಬೆಹಣ್ಣಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. 

ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎನ್.ಎಸ್.ಜಯರಾಂ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಶವ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News