ಕವಿಕಾವ್ಯ ಮೇಳಕ್ಕೆ ಕವನಗಳ ಆಹ್ವಾನ

Update: 2018-09-17 17:45 GMT

ಮಂಡ್ಯ, ಸೆ.17: ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯಮಟ್ಟದ ಕವಿಕಾವ್ಯ ಮೇಳ ಆಯೋಜಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕವನ ಸಂಕಲನ ಬಿಡುಗಡೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. 

ರಾಜ್ಯದ ಎಲ್ಲಾ ಜಿಲ್ಲೆಗಳ ಕವಿಗಳು ತಮ್ಮ ಇತ್ತೀಚಿನ ಎಲ್ಲೂ ಪ್ರಕಟವಾಗದ ಕವನಗಳನ್ನು ಕಳುಹಿಸಿಕೊಡುವಂತೆ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ತಮ್ಮ ಸ್ವವಿವರಗಳನ್ನು ಕಳುಹಿಸುವಂತೆ ಕೋರಲಾಗಿದೆ. 

ಕವನಗಳನ್ನು ಕಳುಹಿಸುವ ಕವಿಗಳು 18 ರಿಂದ 24 ಸಾಲಿನ ಡಿಟಿಪಿ ಪ್ರತಿಗಳನ್ನು ಪೋತೇರ ಮಹದೇವು, ರಾಜ್ಯಾಧ್ಯಕ್ಷರು, ಕಸ್ತೂರಿ ಸಿರಿಗನ್ನಡ ವೇದಿಕೆ, ಹುಲಿವಾನ ಗ್ರಾಮ ಮತ್ತು ಅಂಚೆ, ಕೆರಗೋಡು ಹೋಬಳಿ, ಮಂಡ್ಯ ತಾಲೂಕು, ಮಂಡ್ಯ ಜಿಲ್ಲೆ-571 446 ಈ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9739693599, 9538819322 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News