ಹನೂರು: ಅನಾರೋಗ್ಯಕ್ಕೀಡಾದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಬಸ್ ಚಾಲಕ
Update: 2018-09-18 17:26 GMT
ಹನೂರು,ಸೆ.18: ಕೆಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ರಕ್ತದೊತ್ತಡದಿಂದ ಪ್ರಜ್ಞೆ ತಪ್ಪಿದ ವೃದ್ಧೆಯನ್ನು ಬಸ್ ಚಾಲಕ ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಹನೂರು ಸಮೀಪದ ಕಾಮಗೆರೆ ಸಮೀಪದಲ್ಲಿ ನಡೆದಿದೆ.
ಚೆನ್ನಪಟ್ಟಣ ಮೂಲದ ಮಹದೇವನಗರದ ನಿವಾಸಿ ನಿಂಗಮ್ಮಗೆ ಮಲೈಮಹದೇಶ್ವರ ಬೆಟ್ಟಕ್ಕೆ ಹೋಗಿ, ಕೆಎಸ್ಆರ್ಟಿಸಿ ಬಸ್ನಲ್ಲಿ ಹಿಂದಿರುಗುವಾಗ ಹನೂರು ಸಮೀಪದ ಕಾಮಗೆರೆಯ ಕೊಂಗರಹಳ್ಳಿಯ ಸಮೀಪ ರಕ್ತ ಒತ್ತಡ ಜಾಸ್ತಿಯಾಗಿ ಪ್ರಜ್ಞೆ ತಪ್ಪಿದ್ದು, ಕೂಡಲೇ ಚಾಲಕ ಮತ್ತು ನಿರ್ವಾಹಕ ಬಸ್ ತಿರುಗಿಸಿ ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಪಾರು ಮಾಡಿ ಮಾನವೀಯತೆ ಮೆರೆದಿದ್ದಾರೆ.
ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ಒಂದೆರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.