ಕೊಡಗು ಪ್ರವಾಹ ಸಂತ್ರಸ್ತರನ್ನು ಭೇಟಿಯಾದ ಆರ್ಚ್‌ಬಿಷಪ್ ಪೀಟರ್ ಮಚಾದೊ

Update: 2018-09-20 17:40 GMT

ಕೊಡಗು,ಸೆ.20 : ಪರಿಹಾರ ಕಾರ್ಯಗಳ ಸಂಯೋಜನೆ, ಮೇಲುಸ್ತುವಾರಿ ಮತ್ತು ಯೋಜನೆಯನ್ನು ನೋಡಿಕೊಳ್ಳುವ ಬೆಂಗಳೂರು ಆರ್ಚ್‌ಬಿಷಪ್ ಪೀಟರ್ ಮಚಾದೊ ಮತ್ತವರ ತಂಡ ಸೆಪ್ಟಂಬರ್ 18 ಮತ್ತು 19ರಂದು ನೆರೆಪೀಡಿತ ಕೊಡಗುಗೆ ತೆರಳಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರ ಜೊತೆ ಮಾತುಕತೆ ನಡೆಸಿತು.

ಈ ಹಿಂದೆ ಧರ್ಮಪ್ರಾಂತ್ಯದ ಪರವಾಗಿ ನೆರೆಪೀಡಿತ ಪ್ರದೇಶಕ್ಕೆ ಹಣ ಮತ್ತು ವಸ್ತುಗಳನ್ನು ರವಾನಿಸಲಾಗಿತ್ತು. ಬೆಂಗಳೂರು ಬಹುಪಯೋಗಿ ಸಮಾಜ ಸೇವಾ ಸಂಘದ ನಿರ್ದೇಶಕ ಫಾ.ಜೋಸೆಫ್ ನವೀನ್ ಕುಮಾರ್ ಈ ವೇಳೆ ಆರ್ಚ್‌ಬಿಷಪ್ ಜೊತೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News