ಮೈಸೂರು: ಮಹಾನಗರ ಪಾಲಿಕೆ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ
Update: 2018-09-20 18:23 GMT
ಮೈಸೂರು,ಸೆ.20: ಮೈಸೂರು ಮಹಾನಗರ ಪಾಲಿಕೆಯ ಉದಯಗಿರಿ ವಲಯ ಕಚೇರಿಯ ಕಂದಾಯ ನಿರೀಕ್ಷಕರೋರ್ವರು ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.
ಕಂದಾಯ ನಿರೀಕ್ಷಕ ಕುಮಾರಸ್ವಾಮಿ ಎಂಬವರೇ ಎಸಿಬಿ ಪೊಲೀಸರ ಬಲೆಗೆ ಬಿದ್ದವರಾಗಿದ್ದಾರೆ. ಇವರು ಅಲ್ಲಿನ ನಿವಾಸಿಯೋರ್ವರ ಬಳಿ ಲಂಚ ಸ್ವೀಕರಿಸುವಾಗ ಎಸಿಬಿ ಎಸ್ಪಿ ಶೇಖರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕುಮಾರಸ್ವಾಮಿಯವರನ್ನು ವಶಕ್ಕೆ ಪಡೆದಿದ್ದಾರೆ.
ಪವಿತ್ರ ಕುಮಾರ್ ಎಂಬವರು ದೂರು ನೀಡಿದ ಹಿನ್ನೆಲೆಯಲ್ಲಿ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಲಕ್ಷ್ಮಿ ದೇವಿ ಎಂಬವರಿಂದ ರಾಜೀವನಗರದ ಬಡಾವಣೆಯ ಖಾತೆಪತ್ರ ತಿದ್ದುಪಡಿ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದು, 3 ಸಾವಿರ ರೂ. ಲಂಚ ಕೇಳಿದ್ದರು. 500 ಮುಂಗಡ ಹಣ ಪಡೆದಿದ್ದರು. ಬಾಕಿ ಹಣವನ್ನು ಪಡೆಯುವ ವೇಳೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.