ಗಂಗಾವತಿ: ಶೀಲ ಶಂಕಿಸಿ ಪತ್ನಿಯ ಕೊಲೆ

Update: 2018-09-21 13:28 GMT

ಗಂಗಾವತಿ,ಸೆ.21: ಪತ್ನಿಯ ಶೀಲ ಶಂಕಿಸಿದ ಪತಿಯು ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ತಾಲೂಕಿನ ವಾಣಿಭದ್ರೇಶ್ವರ ದೇವಸ್ಥಾನದ ಹತ್ತಿರ ಗುರುವಾರ ಮದ್ಯಾಹ್ನ ನಡೆದಿದೆ.

ಉಲ್ಫತ್ ಅಪ್ಸಾ (28) ಕೊಲೆಯಾದ ಮಹಿಳೆ. ಅವರು ಶ್ರೀರಾಮುಲು ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಇವರ ಪತಿ ಅಬ್ಬಾಸ್ ಮರಳಿ ಗ್ರಾಮದವನಾಗಿದ್ದು, ರವಿನಗರದ ಖಾಸಗಿ ಮಿಲ್‍ನಲ್ಲಿ ಕೆಲಸ ಮಾಡುತ್ತಿದ್ದಾನೆ. ತನ್ನ ಪತ್ನಿಯ ಶೀಲ ಶಂಕಿಸಿದ ಅಬ್ಬಾಸ್ ಆಕೆಯನ್ನು ಹತ್ಯೆಗೈದಿದ್ದು, ನಂತರ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News