'ಆಪರೇಷನ್ ಕಮಲ' ಮಾಡುತ್ತೇವೆಂದು ನಾವು ಹೇಳಲೇ ಇಲ್ಲ: ಜಗದೀಶ್ ಶೆಟ್ಟರ್

Update: 2018-09-24 15:36 GMT

ಹುಬ್ಬಳ್ಳಿ/ಬೆಂಗಳೂರು, ಸೆ. 24: ಆಪರೇಷನ್ ಕಮಲ ಮಾಡುತ್ತೇವೆಂದು ನಾವು ಎಲ್ಲೂ ಹೇಳಿಲ್ಲ. ಅವರಾಗಿ ಅವರೇ ಸರಕಾರವನ್ನು ಬೀಳಿಸುತ್ತಾರೆಂದು ಹೇಳಿದ್ದೇವೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೈತ್ರಿ ಸರಕಾರವನ್ನು ಬಿಸಿ ಅಥವಾ ತಣ್ಣಗೆ ಮಾಡುವುದು ಮಾಧ್ಯಮದವರ ಕೈಯಲ್ಲಿದ್ದು, ನಾವು ಏನೂ ಮಾಡಿಲ್ಲ. ಸರಕಾರದಲ್ಲಿರುವವರಿಂದಲೇ ಮೈತ್ರಿ ಸರಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.

ಸಂಪುಟ ವಿಸ್ತರಣೆ ಮಾಡಲಾಗುವುದೆಂದು ಹೇಳುತ್ತಿದ್ದವರು ಇದೀಗ ಪರಿಷತ್ ಚುನಾವಣೆ ಬಳಿಕ ವಿಸ್ತರಣೆ ಎಂದು ಹೇಳುತ್ತಿದ್ದಾರೆಂದು ಟೀಕಿಸಿದ ಅವರು, ಮೇಲ್ಮನೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಧಿಕಾರವನ್ನು ಯಡಿಯೂರಪ್ಪನವರಿಗೆ ನೀಡಲಾಗಿತ್ತು. ಆ ವಿಚಾರ ಅವರಿಗೆ ಬಿಟ್ಟದ್ದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News