ಹನೂರು: ಸಹಕಾರ ಸಂಘದ ಮಹಾ ಸಭೆ

Update: 2018-09-24 17:13 GMT

ಹನೂರು,ಸೆ.24: ತಾಲೂಕಿನ ಭದ್ರನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18 ನೇ ಸಾಲಿನ ಸರ್ವಸದಸ್ಯರ ಮಹಾ ಸಭೆ ಸರಸ್ವತಮ್ಮರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜು ರವರು 2017- 18 ನೇ ಸಾಲಿನ ಖರ್ಚು- ವೆಚ್ಚ ಓದಿ ಹೇಳಿದರು. ಸಂಘವು ನಿವ್ವಳ ಲಾಭ 94 ಸಾವಿರ ಗಳಿಸಿದ್ದು, ಜಿಲ್ಲಾ ಬ್ಯಾಂಕಿಗೆ ಕಳೆದ ಸಾಲಿನ 1 ಲಕ್ಷ ರೂ ಸಾಲ ಮರುಪಾವತಿ ಬಾಕಿ ಇದೆ ಎಂದು ತಿಳಿಸಿದರು ಹಾಗೂ 2018 ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿಗೆ ಅನುಮೋದನೆಯನ್ನು ಸಭೆಯಲ್ಲಿ ಪಡೆಯಲಾಯಿತು.

ಈ ಸಂದರ್ಭ ಸಂಘದ ನಿರ್ದೇಶಕರು, ಸದಸ್ಯ ರೈತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News