ಶೀಘ್ರದಲ್ಲೇ ಉಪನ್ಯಾಸಕರ ನೇಮಕ: ಜಿ.ಟಿ.ದೇವೇಗೌಡ

Update: 2018-09-25 18:41 GMT

ಮಂಡ್ಯ, ಸೆ.25: ಉನ್ನತ ಶಿಕ್ಷಣದಲ್ಲಿ ಖಾಲಿ ಇರುವ 350 ಪ್ರಾಂಶುಪಾಲರು ಹಾಗೂ 3,800 ಉಪನ್ಯಾಸಕರ ಹುದ್ದೆಗಳನ್ನು ಶೀಘ್ರದಲ್ಲೇ ತುಂಬಲಾಗುವುದು. ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ನಗರದ ಮಹಿಳಾ ಸರಕಾರಿ ಕಾಲೇಜು ವನರಂಗದಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ ಹಾಗೂ ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿ ಸಿಂಡಿಕೇಟ್‍ಗೆ ಇನ್ನು ಮುಂದೆ ರಾಜಕೀಯ ಮುಖಂಡರನ್ನು ಹೊರತುಪಡಿಸಿ ಪ್ರೊಫೆಸರ್ ಗಳು, ಶಿಕ್ಷಣ ತಜ್ಞರನ್ನು ನೇಮಕ ಮಾಡಲಾಗುವುದು. ಸಿಂಡಿಕೇಟ್ ನೇಮಕಾತಿ ಕುರಿತು ಕಾಯ್ದೆ ಇದೆ. ಆದರೆ, ಅದು ಸಮರ್ಪಕವಾಗಿ ಜಾರಿ ಆಗಿಲ್ಲ ಎಂದು ಅವರು ತಿಳಿಸಿದರು.

ತಂದೆ-ತಾಯಿಯನ್ನು ದೇವರು ಅನ್ನುತ್ತೀರಿ. ಆದರೆ ಕೈ ಮುಗಿದು ನಮಸ್ಕಾರ ಮಾಡುವುದಿಲ್ಲ. ಸರಳ ಮದುವೆಯೇ ಉತ್ತಮ ಆಯ್ಕೆ. ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು ಎಂದು ವಿದ್ಯಾರ್ಥಿನಿಯರಿಗೆ ಹಲವು ಸಲಹೆಗಳನ್ನು ಸಚಿವರು ನೀಡಿದರು.

ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಂ.ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News