ಕೆನರಾ ಬ್ಯಾಂಕ್‍ನಿಂದ ಕೊಡಗು ಸಂತ್ರಸ್ತರಿಗೆ ರೂ.2 ಕೋಟಿ ಪರಿಹಾರ

Update: 2018-09-26 12:10 GMT

ಮಡಿಕೇರಿ, ಸೆ.26: ಕೆನರಾ ಬ್ಯಾಂಕ್ ವತಿಯಿಂದ ಇತ್ತೀಚೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬ್ಯಾಂಕ್ ಸಿಬ್ಬಂದಿಗಳ ಒಂದು ದಿನದ ವೇತನ ರೂ. 2 ಕೋಟಿ ಚೆಕ್‍ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಿದರು.  

ಈ ಸಂದರ್ಭ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮನೋಹರನ್, ಕಾರ್ಯಪಾಲಕ ನಿರ್ದೇಶಕ ಪಿ.ವಿ.ಭಾರತಿ, ಮಂಗಳೂರು ವೃತ್ತದ ಮಹಾ ನಿರ್ದೇಶಕ ಲಕ್ಷ್ಮಿನಾರಾಯಣ ಹಾಗೂ ಕೊಡಗು ಕ್ಷೇತ್ರ ಕಚೇರಿಯ ಮುಖ್ಯಸ್ಥ ವಿ.ಜೆ.ಅರುಣ ಹಾಜರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News