ದೇವೇಗೌಡರ ಆತ್ಮಕಥೆಗೆ ಅಂತಿಮ ರೂಪ: ಎರಡು ದಿನ ಮೈಸೂರಿನಲ್ಲೇ ವಾಸ್ತವ್ಯ

Update: 2018-09-26 15:16 GMT

ಮೈಸೂರು,ಸೆ.26: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಆತ್ಮಕಥೆಗೆ ಅಂತಿಮ ರೂಪ ನೀಡಲು 2 ದಿನಗಳ ಕಾಲ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ಮಾಡಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆತ್ಮಕಥೆಗೆ ಅಂತಿಮ ರೂಪ ನೀಡಲು ಕಳೆದ ರಾತ್ರಿಯೇ ಮೈಸೂರಿಗೆ ಆಗಮಿಸಿದ್ದಾರೆ. ಇಂದು ವಿಶ್ರಾಂತ ಕುಲಪತಿ ಹಾಗೂ ಸಂಬಂಧಿಗಳಾದ ಪ್ರೊ. ಕೆ.ಎಸ್.ರಂಗಪ್ಪ ಅವರ ನಗರದ ತೋಟದ ಮನೆಯಲ್ಲಿ ಬೆಳಿಗ್ಗೆಯಿಂದಲೇ ತಮ್ಮ ಆತ್ಮಕಥೆಗೆ ಅಂತಿಮ ರೂಪ ನೀಡುತ್ತಿದ್ದು, ಇಂದೂ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News