ಚಾಮರಾಜನಗರ: ನಾಡ ಬಾಂಬ್ ಸಿಡಿದು ಸಾವನ್ನಪ್ಪಿದ ಸಾಕುನಾಯಿ

Update: 2018-09-27 12:17 GMT

ಚಾಮರಾಜನಗರ,ಸೆ.27: ನಾಡಬಾಂಬ್ ಸಿಡಿದು ಸಾಕುನಾಯಿಯೊಂದು ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಮುಡಿಗುಂಡ ಬಡಾವಣೆಯಲ್ಲಿ ನಡೆದಿದೆ.

ತೋಟದ ಮನೆಯಲ್ಲಿ ವಾಸವಿರುವ ಸೌಂದರ್ ರಾಜ್ ಎಂಬವರ ಸಾಕು ನಾಯಿ ಪಕ್ಕದ ಜಮೀನಿನಲ್ಲಿ ಹುದುಗಿಸಿಟ್ಟಿದ್ದ ಅಕ್ರಮ ನಾಡಬಾಂಬ್ ಅನ್ನು ನಾಯಿ ಕಚ್ಚಿದ ಪರಿಣಾಮ ಬಾಂಬ್ ಸ್ಫೋಟಗೊಂಡು ಮುಖ ಛಿದ್ರ ಛಿದ್ರವಾಗಿದೆ ಎನ್ನಲಾಗಿದೆ.

ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೃತ ನಾಯಿಯ ಮಾಲಕ ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರಾಣಿ ರಕ್ಷಣಾ ಮಂಡಳಿಗೆ ಹಾಗೂ ಪಟ್ಟಣ ಪಲೀಸ್ ಠಾಣೆಗೆ ದೂರು ನೀಡಿರುವುದಾಗಿ ಸೌಂದರ್ ರಾಜ್ ಅವರ ಪುತ್ರಿ ವೈಷಾಲಿನಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News