ಆಸ್ಪತ್ರೆಯಿಂದ ನಟ ದರ್ಶನ್ ಡಿಸ್ಚಾರ್ಜ್

Update: 2018-09-29 16:11 GMT

ಮೈಸೂರು,ಸೆ.29: ಕಳೆದ ರವಿವಾರ ರಾತ್ರಿ ಕಾರು ಅಪಘಾತಕ್ಕೀಡಾಗಿ ಬಲಗೈ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.

ಈ ವೇಳೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವೈದ್ಯರು ಒಂದು ತಿಂಗಳ ವಿಶ್ರಾಂತಿಯ ಅಗತ್ಯವಿದೆ ಎಂದಿದ್ದಾರೆ. ವೈದ್ಯರು ನನಗೆ ಉತ್ತಮ ಚಿಕಿತ್ಸೆ ನೀಡಿದ್ದು ಅವರಿಗೆ ಧನ್ಯವಾದ ಎಂದರು. ನಾವು ಕಾರಿನಲ್ಲಿ 5 ಜನರು ಮಾತ್ರ ಇದ್ದೆವು. ಊಟ ಮಾಡಿ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ನನ್ನ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿಲ್ಲ. ಅಪಘಾತ ನಡೆದ ಜಾಗ ನೋಡಿದರೆ ನಿಮಗೇ ತಿಳಿಯಲಿದೆ. ನನ್ನ ಗೆಳೆಯ ಕಾರು ಚಾಲನೆ ಮಾಡುತ್ತಿದ್ದು, ಅವರ ತಪ್ಪೂ ಏನಿಲ್ಲ. ಅಪಘಾತದ ಬಗ್ಗೆ ಸಾಕಷ್ಟು ಊಹಾಪೋಹಗಳು ನಡೆದಿವೆ. ಅದೆಲ್ಲಾ ಸುಳ್ಳು ಎಂದರು. ಸಣ್ಣಪುಟ್ಟ ವೈದ್ಯಕೀಯ ಪರೀಕ್ಷೆಯಿರುವ ಕಾರಣ ವೈದ್ಯರು ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News