ಚಾಮರಾಜನಗರ: ಸರ್ಕಾರಿ ಪ್ರೌಢ ಶಾಲೆಯ ಕೊಠಡಿ ಧ್ವಂಸಗೈದ ದುಷ್ಕರ್ಮಿಗಳು

Update: 2018-10-07 11:49 GMT

ಚಾಮರಾಜನಗರ, ಅ. 7: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎರಡು ಕೊಠಡಿಗಳನ್ನು ಕಿಡಿಗೇಡಿಗಳು ಶನಿವಾರ ರಾತ್ರಿ ಹಾಳು ಮಾಡಿದ್ದಾರೆ.

ರಾಮಾಪುರ ಸರ್ಕಾರಿ ಶಾಲೆಯೊಳಗೆ ನುಗ್ಗಿ ಬಾಗಿಲು ಹೊಡೆದು ಹಾಕಿ ಕೊಠಡಿಯೊಳಗಿದ್ದ ಕಂಪ್ಯೂಟರ್ ಹಾಗೂ ಇನ್ನಿತರ ಸಲಕರಣೆಗಳನ್ನು ಧ್ವಂಸ ಮಾಡಿದ್ದಾರೆ.

ಶನಿವಾರ ಶಾಲೆ ಅರ್ಧ ದಿನ ಇದ್ದು , ಶಾಲೆಯಿಂದ ಮಕ್ಕಳು ಮತ್ತು ಶಿಕ್ಷಕರು ತೆರಳಿದ ಬಳಿಕ ಹೊಂಚು ಹಾಕಿದ್ದ ಕಿಡಿಗೇಡಿಗಳು ಶಾಲೆಯೊಳಗೆ ಪ್ರವೇಶ ಮಾಡಿ ಧ್ವಂಸ ಮಾಡಿದ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ರಾಮಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಜೊತೆಗೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News