ಕೇರಳ: ಸಿಪಿಎಂ ಕಾರ್ಯಕರ್ತನ ಮನೆ ಮೇಲೆ ಬಾಂಬ್ ದಾಳಿ

Update: 2018-10-08 11:45 GMT

ಕಲ್ಲಿಕೋಟೆ, ಅ.8: ಇಲ್ಲಿನ ಓಂಚಿಯಂ ಎಂಬಲ್ಲಿ ಸಿಪಿಎಂ ಕಾರ್ಯಕರ್ತರೊಬ್ಬರ ಮನೆಗೆ ದುಷ್ಕರ್ಮಿಗಳು ಬಾಂಬ್ ಎಸೆದಿರುವ ಘಟನೆ ನಡೆದಿದೆ. ಓಂಚಿಯಂ ಏರಿಯ ಕಮಿಟಿ ಸದಸ್ಯ ಪಿ.ಪಿ. ಚಂದ್ರಶೇಖರನ್‍ ರ ಮನೆಗೆ ಬಾಂಬೆಸೆಯಲಾಗಿದ್ದು, ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳಿಗೆ ಹಾನಿಯಾಗಿದೆ. ಘಟನೆಗೆ ಆರೆಸ್ಸೆಸ್ ಕಾರಣ ಎಂದು ಸಿಪಿಎಂ ಆರೋಪಿಸಿದೆ.

ಇದೇ ವೇಳೆ, ಕಳೆದ ದಿವಸ ಬಿಜೆಪಿ ಕಾರ್ಯಕರ್ತರ ಮನೆಗೆ ಬಾಂಬೆಸೆತ ನಡೆದುದುನ್ನು ಪ್ರತಿಭಟಿಸಿ ಇಂದು ವಡಗರದಲ್ಲಿ ಹರತಾಳ ನಡೆದಿದೆ. ವಡಗರ ನಗರಸಭೆ ವ್ಯಾಪ್ತಿಯಲ್ಲಿನ ಚೆರೊಡ್, ಓಂಚಿಯಂ, ಅಯಿಯೂರ್, ಎರಾಮಲ ಪಂಚಾಯತ್‍ಗಳಲ್ಲಿ ಹರತಾಳ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News