ಹನೂರು: ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಕೈ ಬಿಡಲು ಮನವಿ
Update: 2018-10-11 23:16 IST
ಹನೂರು,ಅ.11: ಶಿಕ್ಷಕ ಎಲ್.ದೊರೈಸ್ವಾಮಿಯವರನ್ನು ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಕೈ ಬಿಡುವಂತೆ ಶಾಲೆಯ ಎಸ್ಡಿಎಂಸಿ ಸಮಿತಿ ಸದಸ್ಯರು ಮತ್ತು ಮಾರಳ್ಳಿ ಗ್ರಾಮಸ್ಥರು ಬಿಇಒ ಟಿ. ಆರ್ ಸ್ವಾಮಿಗೆ ಮನವಿ ಮಾಡಿದರು.
ಹನೂರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶಿಕ್ಷಣಾಧಿಕಾರಿಗಳಿಗೆ ಮಾರಳ್ಳಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. ನಂತರ ಗ್ರಾಪಂ ಸದಸ್ಯ ಮುರುಗೇಶ್ ಮಾತನಾಡಿದರು.