ರಾಮನಗರ ಉಪಚುನಾವಣೆ ಹಿನ್ನೆಲೆ: ಶೃಂಗೇರಿ ಮಠಕ್ಕೆ ಭೇಟಿ ನೀಡಿದ ಅನಿತಾ ಕುಮಾರಸ್ವಾಮಿ

Update: 2018-10-12 13:24 GMT

ಚಿಕ್ಕಮಗಳೂರು, ಅ.12: ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಭೇಟಿ ನೀಡಿ, ದೇವರ ದರ್ಶನ ಪಡೆದರು. 

ರಾಮನಗರ ವಿಧಾನಸಭೆ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿರುವ ಅನಿತಾಕುಮಾರಸ್ವಾಮಿ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ಆಗಮಿಸಿದರು. ನಂತರ ಅವರು ಶಾರದಾಂಬೆ ಹಾಗೂ ತೋರಣಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಶಾರಾದಾ ಪೀಠದ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಚನ ಪಡೆದರು. ಈ ವೇಳೆ ಅವರು ತಾವು ಸಲ್ಲಿಸಲಿರುವ ನಾಮಪತ್ರವನ್ನು ಸ್ವಾಮೀಜಿ ಮುಂದಿಟ್ಟು ಆಶೀರ್ವಚನ ಪಡೆದರು. ಜಗದ್ಗರು ಭಾರತೀತೀರ್ಥರು ಫಲಮಂತ್ರಾಕ್ಷತೆ ನೀಡಿ ಅವರನ್ನು ಅನುಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News