ಕೊಪ್ಪ: ಕಸಾಪ ತಾಲೂಕು ಅಧ್ಯಕ್ಷರಾಗಿ ಎಚ್.ಎಸ್.ಇನೇಶ್ ನೇಮಕ

Update: 2018-10-13 16:39 GMT

ಕೊಪ್ಪ, ಅ.13: ಕನ್ನಡ ಸಾಹಿತ್ಯ ಪರಿಷತ್ ಕೊಪ್ಪ ತಾಲೂಕು ಘಟಕದ ಅಧ್ಯಕ್ಷನ್ನಾಗಿ ನಿಲುವಾಗಿಲು ಕಾರಗದ್ದೆಯ ಎಚ್.ಎಸ್ ಇನೇಶ್‍ರನ್ನು ಪರಿಷತ್‍ನ ಜಿಲ್ಲಾಧ್ಯಕ್ಷರು ನಿಯೋಜಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನೂತನ ಅಧ್ಯಕ್ಷ ಎಚ್.ಎಸ್. ಇನೇಶ್ ಜಿಲ್ಲಾಧ್ಯಕ್ಷರ ಸೂಚನೆಯಂತೆ ತಾಲೂಕು ಘಟಕದ ಕಾರ್ಯಕಾರಿ ಸಮಿತಿಯನ್ನು ಪುನರ್‍ರಚಿಸಲಾಗಿದ್ದು, ಅಣ್ಣಯ್ಯ ಎಚ್.ಎಸ್. ಜಗದೀಶ್(ಗೌರವ ಕಾರ್ಯದರ್ಶಿ) ಎಂ.ಆರ್. ರಮೇಶ್(ಗೌರವ ಕೋಶಾಧ್ಯಕ್ಷರ) ಬಿಳಗಾರು ರಾಜಾಶಂಕರ್(ಪರಿಶಿಷ್ಟ ಜಾತಿ ಪ್ರತಿನಿದಿ) ಶೈಲಜಾ ವಿಜಯಕುಮಾರ್(ಮಹಿಳಾ ಪ್ರತಿನಿಧಿ), ಈ.ಎಸ್. ಧರ್ಮಪ್ಪ(ಸಂಘ ಸಂಸ್ಥೆ ಪ್ರತಿನಿಧಿ), ಕೆ.ಗಣಪತಿ(ಶಿಕ್ಷಣ ಇಲಾಖೆ), ಎಚ್.ಎಂ. ರವಿಕಾಂತ್(ನಿಕಟಪೂರ್ವ ಅಧ್ಯಕ್ಷ), ಜಿನೇಶ್ ಇರ್ವತ್ತೂರು(ಪ್ರಧಾನ ಸಂಚಾಲಕ), ತಮನ್ನ(ಸಾಂಸ್ಕೃತಿಕ ಕಾರ್ಯದರ್ಶಿ), ಎಚ್.ಕೆ. ರಾಘವೇಂದ್ರ, ಬಿ.ಎನ್. ಸತ್ಯನಾರಾಯಣ(ಸಂಘಟನಾ ಕಾರ್ಯದರ್ಶಿ) ಮುಂತಾದವರನ್ನು ಆಯ್ಕೆ ಮಾಡಲಾಗಿದೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News