ಮ್ಯಾರಥಾನ್ ನಲ್ಲಿ ಓಡಲು ಹೋಗಿ ಮುಗ್ಗರಿಸಿ ಬಿದ್ದ ಸಚಿವ ಜಿ.ಟಿ.ದೇವೇಗೌಡ

Update: 2018-10-14 16:07 GMT

ಮೈಸೂರು,ಅ.14: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಏರ್ಪಡಿಸಲಾಗಿದ್ದ ಆಫ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮುಗ್ಗರಿ ನೆಲಕ್ಕೆ ಬಿದ್ದ ಘಟನೆ ನಡೆಯಿತು.

ನಗರದ ಓವೆಲ್ ಮೈದಾನದ ಮುಂಭಾಗ ಮ್ಯಾರಥಾನ್‍ಗೆ ರವಿವಾರ ಚಾಲನೆ ನೀಡಿದ ಸಚಿವರು, 2ಕೀ.ಮಿ ಹಿರಿಯರು ಓಟದಲ್ಲಿ ಭಾಗಿಯಾಗಿರುವುದನ್ನು ಕಂಡು ಪ್ರಭಾವಿತರಾದ ಸಚಿವರು, ತಾವು ಸಹ ಓಡಲು ಪ್ರಾರಂಭಿಸಿದರು. ಓಡುವ ವೇಳೆ ತಮ್ಮ ಪಂಚೆಯನ್ನು ಮೇಲಕ್ಕೆ ಎತ್ತಿಕಟ್ಟಿಕೊಳ್ಳುವ ಸಂದರ್ಭದಲ್ಲಿ ಮುಗ್ಗರಿಸಿ ನೆಲಕ್ಕೆ ಬಿದ್ದರು. 

ಸಚಿವರು ಬಿದ್ದದನ್ನು ಕಂಡ ತಕ್ಷಣ ಅಲ್ಲಿದ್ದವರು ಅವರನ್ನು ಮೇಲಕ್ಕೆತ್ತಿ ಕುಳ್ಳಿರಿಸಿದರು. ಸ್ವಲ್ಪ ಗಾಬರಿಯಾಗಿದ್ದ ಸಚಿವರು ನಂತರ ಸಾವರಿಸಿಕೊಂಡು ಮೇಲಕ್ಕೆ ಎದ್ದು ಏನೂ ಆಗಿಲ್ಲ ಗಾಬರಿ ಪಡಬೇಡಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News