ಚಾಮರಾಜನಗರ: ಎಸಿಬಿ ಬಲೆಗೆ ಬಿದ್ದ ಕಿರಿಯ ಇಂಜಿನಿಯರ್

Update: 2018-10-15 12:09 GMT

ಚಾಮರಾಜನಗರ,ಅ.15: ಕಾಮಗಾರಿ ಹಣ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುವಾಗ ಕಿರಿಯ ಇಂಜಿನಿಯರ್ ಮತ್ತು ಸಹಾಯಕ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ.

ಚಾಮರಾಜನಗರ ನಗರಸಭೆಯ ಕಿರಿಯ ಇಂಜಿನಿಯರ್ ಬಸವರಾಜು ವಾರ್ಡ್ 10 ರಲ್ಲಿ 11 ಲಕ್ಷ ರೂಪಾಯಿ ಕಾಮಗಾರಿ ನಡೆಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಕುಮಾರ್ ರವರಿಗೆ ಬಿಲ್ ಹಣ ಪಾವತಿಗಾಗಿ 75 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇಂದು ಮದ್ಯಾಹ್ನ ಗುತ್ತಿಗೆದಾರ ಶಿವಕುಮಾರ್ ಲಂಚದ ಹಣ 25 ಸಾವಿರ ರೂಪಾಯಿಗಳನ್ನು ಸ್ವೀಕರಿಸುವಾಗ ಎಸಿಬಿ ಡಿವೈಎಸ್ ಪಿ ಮೋಹನ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಕಿರಿಯ ಇಂಜಿನಿಯರ್ ಬಸವರಾಜು ಹಾಗೂ ಸಹಾಯಕ ಶಿವಕುಮಾರ್ ರವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News