ಹನೂರು : ತಬ್ಬೀಖಿ ಇಜ್ತೆಮಾ ಕೂಟ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ

Update: 2018-10-16 13:10 GMT

ಹನೂರು,ಅ.16 : ಚಾಮರಾಜನಗರ ಜಿಲ್ಲಾ ತಬ್ಬೀಖಿ ಇಜ್ತೆಮಾ ಕೂಟ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಹನೂರು ತಾಲ್ಲೂಕಿನ ಕುರುಬರದೂಡ್ಡಿಯ ಸಮೀಪ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದೆಹಲಿಯ ಹಝ್ರತ್ ನಿಜಾಮುದ್ದಿನ್ ನಿಂದ ಆಗಮಿಸಿದ ಗುರುಗಳಾದ ರಿಝ್ವಾನ್‍, ಮೌಲಾನ ಅಬ್ದುಲ್ ಜಬ್ಬಾರ್, ಶಮೀನ್‍ ಧಾರ್ಮಿಕ ವಿಚಾರಗಳ ಕುರಿತು ಪ್ರವಚನ ನೀಡಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗುರುಗಳಾದ ಮೌಲಾನ ಅಬ್ದುಲ್ ಜಬ್ಬಾರ್ ಅವರು ಪ್ರತಿಯೊಬ್ಬರೂ ಕೂಡ ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಬಾಳಿ ಸರ್ವರಿಗೂ ಒಳಿತನ್ನೂ ಬಯಿಸಿ, ಉತ್ತಮ ಪ್ರಜೆಗಳಾಗಿ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೂಡಿಸಿ ಉಜ್ವಲವಾದ ಭವಷ್ಯ ರೂಪಿಸಿ ಎಂದರು.

ಕಳೆದ ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಹನೂರು ತಾಲ್ಲೂಕಿನ ಬಂಡಳ್ಳಿ, ಚಿತ್ತಾಪುರ, ಕೌದಳ್ಳಿ, ಹನೂರು ಟೌನ್ ಆರ್ ಎಸ್ ದೂಡ್ಡಿ, ಮಂಗಲ, ಎಲ್ಲೆಮಾಲ, ಗಂಡಾಪುರ, ರಾಮಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News