ಲೈಂಗಿಕ ಕಿರುಕುಳ ಆರೋಪ : ನೇಣು ಬಿಗಿದು ಕಬಡ್ಡಿ ಕೋಚ್‍ ಆತ್ಮಹತ್ಯೆ

Update: 2018-10-16 13:57 GMT

ದಾವಣಗೆರೆ,ಅ.16: ಬೆಂಗಳೂರು ಮೂಲದ ಕಬಡ್ಡಿ ಕೋಚ್‍ ಹರಿಹರ ನಗರದ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿರುವ ಘಟನೆ ಸೋಮವಾರ ನಡೆದಿದೆ.
ಮೂಲತಃ ಧಾರವಾಡ ಜಿಲ್ಲೆಯವರಾದ, ಬೆಂಗಳೂರಿನಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಸಾಯ್)ದ ಹಿರಿಯ ಕಬಡ್ಡಿ ತರಬೇತುದಾರ ರುದ್ರಪ್ಪ ಹೊಸಮನಿ(56 ವರ್ಷ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

13 ವರ್ಷದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪ ಎದುರಿಸುತ್ತಿದ್ದ ರುದ್ರಪ್ಪ ಹೊಸಮನಿ ಹರಿಹರದ ರೈಲ್ವೆ ನಿಲ್ದಾಣದಲ್ಲಿ ಇಳಿದು, ಅಲ್ಲಿನ ಲಾಡ್ಜ್ ವೊಂದರಲ್ಲಿ ತಂಗಿದ್ದಾರೆ. ಆತ್ಮಹತ್ಯೆಗೆ ಮುನ್ನ ತನ್ನ ಪತ್ನಿ, ಪುತ್ರ ಹಾಗೂ ಬಂಧು-ಬಳಗ, ಸಹೋದ್ಯೋಗಿಗಳಿಗೆ ತನ್ನನ್ನು ಕ್ಷಮಿಸುವಂತೆ, ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವಂತೆ ಮಗನಿಗೆ ತಿಳಿಸಿ, ತನ್ನ ದೇಹದಾನವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವಂತೆ ಮರಣ ಪೂರ್ವದಲ್ಲಿ ಪತ್ರ ಬರೆದಿದ್ದಾರೆ. 

ಹಿರಿಯ ಕಬಡ್ಡಿ ಕೋಚ್ ರುದ್ರಪ್ಪ ಹೊಸಮನಿ ಮೇಲೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 13 ವರ್ಷದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಹೊಸಮನಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಪೊಲೀಸರು ನಡೆಸಿದ್ದರು. ಈ ಘಟನೆಯಿಂದ ಜಿಗುಪ್ಸೆಗೊಂಡ ಕಬಡ್ಡಿ ಕೋಚ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹರಿಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News