ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2018-10-16 13:30 GMT

ಬೆಂಗಳೂರು, ಅ.16: ರಾಜ್ಯ ಸರಕಾರವು ಐವರು ಐಪಿಎಸ್ ಹಾಗೂ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಜಿಪಿ ಹಾಗೂ ಹೆಚ್ಚುವರಿ ನಗರ ಪೊಲೀಸ್ ಆಯುಕ್ತ(ಸಂಚಾರ)ರನ್ನಾಗಿ ಹರಿಶೇಖರನ್, ಕೆಎಸ್‌ಆರ್‌ಪಿ ಮೊದಲನೆ ಬೆಟಾಲಿಯನ್‌ನ ಕಾಮಾಂಡೆಂಟ್‌ರನ್ನಾಗಿ ಅಜಯ್ ಹಿಲ್ಲೋರಿ, ಬೆಂಗಳೂರು ನಗರದ ದಕ್ಷಿಣ ವಿಭಾಗದ ಡಿಸಿಪಿಯನ್ನಾಗಿ ಕೆ.ಅಣ್ಣಾಮಲೈಯನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರದ ಪೂರ್ವ ವಿಭಾಗದ ಡಿಸಿಪಿಯನ್ನಾಗಿ ರಾಹುಲ್‌ಕುಮಾರ್ ಶಹಾಪುರ್‌ವಾಡ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಹರೀಶ್ ಪಾಂಡೆಯನ್ನು ವರ್ಗಾವಣೆ ಸರಕಾರ ಆದೇಶ ಹೊರಡಿಸಿದೆ.

ಐಎಎಸ್: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಆರ್ಥಿಕ ಮತ್ತು ಐಟಿ)ಯ ವಿಶೇಷ ಆಯುಕ್ತರನ್ನಾಗಿ ಡಾ.ಎಂ.ಲೋಕೇಶ್ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರನ್ನಾಗಿ ಕೆ.ಶ್ರೀನಿವಾಸ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News