ಸಾಲ ಕೇಳಿದ ಮಹಿಳೆಯೊಂದಿಗೆ ಅನುಚಿತ ವರ್ತನೆ : ಫೈನಾನ್ಸ್ ಕಂಪೆನಿಯ ವ್ಯವಸ್ಥಾಪಕನಿಗೆ ಥಳಿತ

Update: 2018-10-16 14:17 GMT

ದಾವಣಗೆರೆ,ಅ.16: ಎರಡು ಲಕ್ಷ ರೂ. ಸಾಲ ಕೇಳಿದ್ದ ಮಹಿಳೆಗೆ ಮನೆಗೆ ಕರೆದು, 2 ಸಾವಿರ ಕೊಡುತ್ತೇನೆಂದ ಫೈನಾನ್ಸ್ ಕಂಪನಿಯೊಂದರ ವ್ಯವಸ್ಥಾಪಕನಿಗೆ ಮಹಿಳೆ ದೊಣ್ಣೆಯಿಂದ ಹೊಡೆದು, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ. 

ನಗರದ ಫೈನಾನ್ಸ್ ಕಂಪನಿಯೊಂದರ ವ್ಯವಸ್ಥಾಪಕ, ಮಡಿಕೇರಿ ಮೂಲದ ದೇವಯ್ಯ ಥಳಿತಕ್ಕೆ ಒಳಗಾದ ವ್ಯಕ್ತಿ. ಹೌಸಿಂಗ್ ಫೈನಾನ್ಸ್ ಮ್ಯಾನೇಜರ್ ದೇವಯ್ಯ ಬಳಿ ಬ್ಯೂಟಿಪಾರ್ಲರ್ ಅಂಗಡಿ ಮಾಡುವ ಉದ್ದೇಶದಿಂದ ಫೈನಾನ್ಸ್ ನಲ್ಲಿ 2 ಲಕ್ಷ ರೂ. ಸಾಲ ಕೇಳಿದ್ದ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಮನೆಗೆ ಬರುವಂತೆ ಕರೆದಿದ್ದ.

ಮನೆಗೆ ಬಂದ ಮಹಿಳೆಯೊಂದಿಗೆ ಮ್ಯಾನೇಜರ್ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಹೌಸಿಂಗ್ ಫೈನಾನ್ಸ್ ಮ್ಯಾನೇಜರ್ ದೇವಯ್ಯನ ವರ್ತನೆ, ಮಾತುಗಳಿಂದ ಆತನ ಬಗ್ಗೆ ಅನುಮಾನಗೊಂಡಿದ್ದ ಮಹಿಳೆ ತನ್ನ ಪತಿ ಹಾಗೂ ಕೆಲ ಮಾಧ್ಯಮದವರಿಗೂ ಮಾಹಿತಿ ನೀಡಿದ್ದರು. ಅಲ್ಲದೇ, ಕೆಲ ಸಂಘಟನೆಯವರೂ ಅಲ್ಲಿ ಜಮಾಯಿಸಿದ್ದರು. ವ್ಯವಸ್ಥಾಪಕನನ್ನು ರೋಡಿಗೆ ಎಳೆದು ತಂದ ಮಹಿಳೆ ಮನಸೋ ಇಚ್ಛೆ ಥಳಿಸಿದ್ದಾರೆ. 

ನಂತರ ಹೌಸಿಂಗ್ ಫೈನಾನ್ಸ್ ಮ್ಯಾನೇಜರ್ ದೇವಯ್ಯನನ್ನು ಪೊಲೀಸ್ ಠಾಣೆ ವಶಕ್ಕೆ ಒಪ್ಪಿಸಲಾಯಿತು. ಮ್ಯಾನೇಜರ್ ಗೆ ಮಹಿಳೆ ಥಳಿಸುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News