ಹನೂರು : ಗಾಂಜಾ ಸಾಗಾಟ; ಇಬ್ಬರ ಬಂಧನ

Update: 2018-10-16 17:42 GMT

ಹನೂರು,ಅ.16 : ತಾಲ್ಲೂಕಿನ ಮೀಣ್ಯಂದಿಂದ ಕೂಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗ ಮಧ್ಯದಲ್ಲಿ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತಮಿಳುನಾಡಿನ ಕಡೆಗೆ ಸಾಗಿಸುತ್ತಿದ್ದ ಆರೋಪಿಗಳನ್ನು ರಾಮಾಪುರ ಪೋಲಿಸರು ಬಂಧಿಸಿದ್ದಾರೆ.

ತಾಲೂಕಿನ  ಮೀಣ್ಯಂ ಗ್ರಾಮದ ನಿವಾಸಿ ದಿನೇಶ್ ಹಾಗೂ ತಮಿಳುನಾಡು ಮೂಲದ ಕೂಟೈನ್ಲ್ಯನ್ ನಿವಾಸಿ ಮಲ್ಲಪ್ಪನ್ ಬಂಧಿತ ಆರೋಪಿಗಳಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರೂ ಸಹ ಆರೋಪಿಗಳು ಕೂಡ ಶಾಮಿಲಾಗಿದ್ದಾರೆ ಎಂಬುದು ಖಚಿತ ಮೂಲಗಳಿಂದ ಪೋಲಿಸರಿಗೆ ಮಾಹಿತಿ ದೂರಕಿದ್ದು ಅವರಿಗೆ ಪೋಲಿಸರು ಬಲೆ ಬೀಸಿದ್ದಾರೆ.

ಘಟನೆ ವಿವರ : ಮಂಗಳವಾರ ಮುಂಜಾನೆಯೇ ಡಿವೈಎಸ್ಪಿ ಪುಟ್ಟಮಾದಯ್ಯ ಮಾರ್ಗದರ್ಶನದಲ್ಲಿ ರಾಮಾಪುರ ಅರಕ್ಷಕ ನೀರಿಕ್ಷಕರಾದ ಮನೋಜ್‍ಕುಮಾರ್ ಅವರ ನೇತ್ರತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಗಳಿಂದ ಸುಮಾರು 2ಕೆಜಿ100 ಗ್ರಾಂ ಗಾಂಜಾ, ಬೈಕ್‍ನ್ನು ಸಹ ವಶಪಡಿಸಿಕೂಂಡು,  ಆರೋಪಿಯನ್ನು ಬಂಧಿಸಿ ಪೋಲಿಸರು ಮುಂದಿನ ಕ್ರಮಕೈಗೂಂಡಿದ್ದಾರೆ.

ದಾಳಿಯಲ್ಲಿ ಸಿಬ್ಬಂದಿಗಳಾದ ಭೋಮ್ಮೇಗೌಡ, ಸುರೇಶ್ ನವೀನ್, ಬಸವರಾಜು ನಾಗೇಂದ್ರ, ಸೈಯದ್, ರಘು, ಕಿರಣ್‍ಕುಮಾರ್ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News