ವಿದ್ಯುತ್ ಕಂಬಕ್ಕೆ ಬೈಕ್‍ ಢಿಕ್ಕಿ : ಓರ್ವ ಮೃತ್ಯು

Update: 2018-10-16 17:53 GMT

ಹನೂರು,ಅ.16 : ಸಮೀಪದ  ಅಂಭಿಕಾಪುರದ  ಉಡುತೋರೆ ಹಳ್ಳದ ಸೇತುವೆಯ ಬಳಿ ವಿದ್ಯುತ್ ಕಂಬಕ್ಕೆ ಬೈಕೊಂದು ಢಿಕ್ಕಿ ಹೂಡೆದು ಸವಾರ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ಆಂದ್ರಪ್ರದೇಶ ಮೂಲದ ರಾಜು ಎಂದು ಗುರುತಿಸಲಾಗಿದೆ. ರಾಜು ಬಿಎಸ್‍ಎನ್‍ಎಲ್ ಕೇಬಲ್ ಕಲೆಕ್ಷನ್‍ಗಾಗಿ ಕೆಲಸಕ್ಕಾಗಿ ಬಂದಿದ್ದು,  ಅದರಂತೆ ಹನೂರು ತಾಲ್ಲೂಕಿನ ಅಂಬಿಕಾಪುರದ ಬಳಿ  ಕೆಲಸ ಮುಗಿಸಿ ಬಳಿ ಬೈಕ್‍ನಲ್ಲಿ ತೆರಳುತ್ತಿದ್ದಾಗ ಉಡುತೋರೆ ಹಳ್ಳದ ಸೇತುವೆಯ ಬಳಿ ಇರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೂಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಾಮಾಪುರ ಪೋಲಿಸ್ ಠಾಣೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮಕೈಗೂಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News